KAS MASTERMIND
21.7K subscribers
3.12K photos
26 videos
883 files
394 links
Karnataka and all state question with answer (Kannada)❤️ & English language

YouTube channel

https://www.youtube.com/@KASMASTERMIND-x5n

Cont NO 9686965597(only whatsapp & Telegram)
Download Telegram
ಇವರು ಈಗಾಗಲೇ ಸರ್ಕಾರಿ ಹುದ್ದೆಯನ್ನು ಪಡೆದು ಇನ್ನೂ ಉನ್ನತ ಮಟ್ಟಕ್ಕೆ ಹೋಗಬೇಕೆಂಬ ಹಂಬಲ ಅವರದು ಇನ್ನು ಕೆಲವರಿಗೆ ಯಾವುದಾದರೂ ಒಂದು ಸರ್ಕಾರಿ ಹುದ್ದೆ ಸಿಕ್ಕರೆ ಸಾಕು ಎಂದು ಅಂದುಕೊಂಡವರು ತುಂಬಾ ಜನ ಓದ್ತಾ ಇದ್ದಾರೆ

ಇವರು ನನಗೆ ಕೇಳಿದ್ದು ಸರ್ ಪ್ರಚಲಿತ ಘಟನೆ ತುಂಬಾ ಜನ youtube ಅಲ್ಲಿ ಮಾಡ್ತಾರಲ್ಲ ಅದೇ ರೀತಿನ ಅಥವಾ ನೀವು ಏನಾದರೂ ಬೇರೆ ರೀತಿಯಾಗಿ ಕ್ಲಾಸ್ಗಳನ್ನ ಮಾಡುತ್ತೀರಿ ಎಂದು ಕೇಳಿದರು

ನಾನು ಹೇಳಿದ್ದು ಪ್ರಚಲಿತ ಘಟನೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆಯೂ ಕೂಡ ಚರ್ಚೆ ಮಾಡಬೇಕು ಅವಾಗ ಅದು ಪ್ರಚಲಿತ ಘಟನೆ ಎಂದು ಅನಿಸಿಕೊಳ್ಳುತ್ತದೆ

ತುಂಬಾ ಜನ ಕೇಳ್ತಾ ಇದ್ದೀರಿ ಸರ್ ಒಂದು 10 ಗಂಟೆಯಲ್ಲಿ ಎಂಟು ತಿಂಗಳ ಪ್ರಚಲಿತ ಘಟನೆಯನ್ನು ಮುಗಿಸಿ ಕೊಡಿ ಅಂತ ದಯವಿಟ್ಟು ಕ್ಷಮಿಸಿ ನಾನು ಆ ರೀತಿ ಮಾಡುವುದಿಲ್ಲ

KAS ತಯಾರಿ ನಡೆಸುವವರು ಪವನ್ ರಜಪೂತ್ ಸರ್ ಆದಷ್ಟು ಬೇಗ ಸಂಪರ್ಕಿಸಿ ಯಾವಾಗ ಬೇಕಾದರೂ ಅಧಿಸೂಚನೆಗಳನ್ನು ಹೊರಡಿಸಬಹುದು

ಇನ್ನಿತರ ಪರೀಕ್ಷೆಗೆ ತಯಾರಿ ನಡೆಸುವವರು VK Kingdom sir ಕ್ಲಾಸಸ್ ಗಳನ್ನು ಕೇಳಿಕೊಳ್ಳಿ

ಎಲ್ಲರಿಗೂ ನನ್ನ ಸಲಹೆ ಇಷ್ಟ ಚೆನ್ನಾಗಿ ಓದಿಕೊಳ್ಳಿ ಒಳ್ಳೆಯ ಮಾರ್ಗದರ್ಶನಗಳನ್ನು ತೆಗೆದುಕೊಳ್ಳಿ
12
App ಓಪನ್ ಮಾಡಿದ ನಂತರ ಪ್ರಚಲಿತ ಘಟನೆ ಎಂಬ ಫೋಲ್ಡರ್ ಬರುತ್ತೆ ಅದನ್ನು ಓಪನ್ ಮಾಡಿ ಅಲ್ಲಿ ನಿಮಗೆ ಕ್ಲಾಸಿನ ವಿವರವನ್ನು ಸಿಗುತ್ತದೆ
👇👇👇👇👇👇👇👇
Current affairs class details

Step 1 open current affairs folder

Step 2 Dec to June current affairs classes and payment


👇👇👇👇👇👇👇👇👇
Play Store link

Check out "KAS MASTERMIND"
https://play.google.com/store/apps/details?id=com.jdbcko.nwvusy
8
ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿ ಇದನ್ನ ಕೇಳಿ ನಿಮಗೆ ಅನುಕೂಲವಾಗಲಿ ಎಂದು ರಿವಿಜನ್ ಪ್ರಚಲಿತ ಘಟನೆ ಮತ್ತು ವಿಚಾರಗಳು ಸಂಪೂರ್ಣ ಮಾಹಿತಿ ಇದರಲ್ಲಿ ಕೊಟ್ಟಿದ್ದೇನೆ
🙏137🫡4
KAS MASTERMIND
Voice message
ಡಿಸೆಂಬರ್ 2025 ಇಂದ ಹಿಡಿದು ಜುಲೈ 2026 ವರೆಗೂ 8 ತಿಂಗಳ ಪ್ರಚಲಿತ ಘಟನೆ ಭಾರತ ಅರ್ಥ ವ್ಯವಸ್ಥೆ ಪ್ರಚಲಿತ ಘಟನೆ ಸಂಪೂರ್ಣವಾಗಿ ವಿಡಿಯೋವನ್ನು ಅಪ್ಲೋಡ್ ಆಗಿದೆ ಪ್ರತಿಯೊಬ್ಬರು ನೋಡಿಕೊಳ್ಳಿ ಅದು ಫ್ರೀ ಆಗಿದೆ
24💯1
*PC: Hall Ticket:*
✍🏻📋✍🏻📋✍🏻📋

2026 ಅಗಸ್ಟ್-02 ರಂದು ನಡೆಯಲಿರುವ 3,395 + 596 (HK)=3,991 Civil ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪ್ರವೇಶ ಪತ್ರ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
https://www.cetonline.karnataka.gov.in/KEA_EXAM_PORTAL/Forms/Candidates/Login
✍🏻📋✍🏻📋✍🏻📋✍🏻📋
5
ಆತ್ಮೀಯ PC ಆಕಾಂಕ್ಷಿಗಳ ಗಮನಕ್ಕೆ..
HK&NHK ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರೀಕ್ಷೆ ಕೇಂದ್ರ ಬೇರೆ ಬೇರೆ ಕಡೆ ಬಂದಿದ್ದರೆ , KEA ಮುಖ್ಯಸ್ಥರ ಗಮನಕ್ಕೆ ತಂದರೆ ಪರಿಹಾರ ನೀಡುತ್ತಾರೆ.

ಯಾವುದೇ ಕಾರಣಕ್ಕೂ ಅನವಶ್ಯಕ ಗೊಂದಲ ಮಾಡಿಕೊಳ್ಳದೆ , ತಾಳ್ಮೆಯಿಂದ ಅಧ್ಯಯನದ ಕಡೆ ಗಮನ ಕೊಡಿ.

ಒಬ್ಬನೇ ಒಬ್ಬ ಅಭ್ಯರ್ಥಿ ಅವಕಾಶ ಕಳೆದು ಕೊಳ್ಳದ ಹಾಗೆ KEA ಕ್ರಮ ಕೈಗೊಳ್ಳುತ್ತದೆ..
19
ಜೇನುನೊಣವು ಜೇನು ಕಸದಿಗಿಂತ ಶ್ರೇಷ್ಠವೆಂದು ಕಸದ ನೊಣಕ್ಕೆ ಮನವರಿಕೆ ಮಾಡಲು ತನ್ನ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವುದಿಲ್ಲ."

ಅರ್ಥ:
ನಿಮ್ಮ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಮನಸ್ಸಿಲ್ಲದವರೊಂದಿಗೆ ವಾದಿಸಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನಿಮ್ಮ ಕಾರ್ಯವೇ ನಿಮ್ಮ ಮೌಲ್ಯವನ್ನು ಸಾಬೀತುಪಡಿಸಲಿ.
42💯11👌5
ಪ್ರಚಲಿತ ಪೇಪರ್ 28.07.2026.pdf
16.1 MB
ಪ್ರಚಲಿತ ಪೇಪರ್ 28.07.2026.pdf
2018ರಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿದ ಭಾರತ:
ವಿಶ್ವ ಉಕ್ಕು ಸಂಸ್ಥೆಯ (World Steel Association - worldsteel) ವರದಿಯ ಪ್ರಕಾರ, ಭಾರತವು 2018ನೇ ಸಾಲಿನಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ 2ನೇ ಅತಿ ದೊಡ್ಡ ಕಚ್ಚಾ ಉಕ್ಕು (Crude Steel) ಉತ್ಪಾದಕ ದೇಶವಾಯಿತು.

ಉತ್ಪಾದನಾ ಪ್ರಮಾಣ:
2018ರಲ್ಲಿ ಭಾರತವು ಸುಮಾರು 109.3 ಮಿಲಿಯನ್ ಟನ್ (MT) ಉಕ್ಕನ್ನು ಉತ್ಪಾದಿಸಿ ಈ ಸಾಧನೆ ಮಾಡಿತು.

ಪ್ರಸ್ತುತ ಸ್ಥಾನಮಾನ:
ಜಗತ್ತಿನಲ್ಲೇ ಚೀನಾ ದೇಶವು ಮೊದಲ ಸ್ಥಾನದಲ್ಲಿದ್ದು, ಭಾರತವು ತನ್ನ 2ನೇ ಸ್ಥಾನವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದೆ
8
🌳ಭೌಗೋಳಿಕ ಮತ್ತು ಆಡಳಿತಾತ್ಮಕ ಮಾಹಿತಿ

ಸ್ಥಳ:
ಟುರ್ಟುಕ್ ಗ್ರಾಮವು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್ (Leh) ಜಿಲ್ಲೆಯಲ್ಲಿ ಬರುತ್ತದೆ
ವಿಶೇಷತೆ:
ಇದು ಭಾರತ-ಪಾಕಿಸ್ತಾನ ಗಡಿಯ (LoC) ಭಾರತದ ಕಡೆಯಿರುವ ಕೊನೆಯ ಹಳ್ಳಿಯಾಗಿದೆ ಮತ್ತು ಶ್ಯೋಕ್ ನದಿ (Shyok River) ದಂಡೆಯಲ್ಲಿದೆ.
ವಿಭಜನೆ ಮತ್ತು ಯುದ್ಧ:
1947ರ ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಈ ಗ್ರಾಮವು ಪಾಕಿಸ್ತಾನದ ವಶದಲ್ಲಿತ್ತು (ಬಾಲ್ಟಿಸ್ತಾನ್ ಭಾಗ)
ಭಾರತಕ್ಕೆ ಸೇರ್ಪಡೆ:
1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಈ ಗ್ರಾಮವನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ವಶಪಡಿಸಿಕೊಂಡು, ಭಾರತದ ಭಾಗವಾಗಿಸಿತು.
ಸಂಸ್ಕೃತಿ ಮತ್ತು ಭಾಷೆ:
ಇಲ್ಲಿನ ಜನರು ಮುಖ್ಯವಾಗಿ ಬಾಲ್ಟಿ (Balti) ಎಂಬ ವಿಶಿಷ್ಟ ಭಾಷೆಯನ್ನು ಮಾತನಾಡುತ್ತಾರೆ ಮತ್ತು ಬಾಲ್ಟಿ ಸಂಸ್ಕೃತಿಯನ್ನು ಹೊಂದಿದ್ದಾರೆ.
ಇನ್ನರ್ ಲೈನ್ ಪರ್ಮಿಟ್ (ILP):
ಟುರ್ಟುಕ್ ಭಾರತದ ಗಡಿ ಭಾಗದಲ್ಲಿರುವುದರಿಂದ,ಇಲ್ಲಿಗೆ ಭೇಟಿ ನೀಡಲು ಲೇಹ್ ಜಿಲ್ಲಾಡಳಿತದಿಂದ 'ಇನ್ನರ್ ಲೈನ್ ಪರ್ಮಿಟ್' (ಅನುಮತಿ ಪತ್ರ) ಪಡೆಯುವುದು ಕಡ್ಡಾಯವಾಗಿದೆ. ಇದು ಕೇವಲ 5 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
6
🚩THE HINDU NEWS PAPER

👉ವಯಸ್ಸಾದ ಮತ್ತು ಅಂತಿಮ ಹಂತದ ಅನಾರೋಗ್ಯ ಪೀಡಿತ ಕೈದಿಗಳ ಬಿಡುಗಡೆಗೆ ನೀತಿ ರೂಪಿಸುವ ಬಗ್ಗೆ
ಸುಪ್ರೀಂ ಕೋರ್ಟ್ ಆದೇಶ
◈ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೂರು ತಿಂಗಳೊಳಗೆ ವಯಸ್ಸಾದ ಮತ್ತು ಅಂತಿಮ ಹಂತದ ಅನಾರೋಗ್ಯ ಪೀಡಿತ ಕೈದಿಗಳ ಅಕಾಲಿಕ ಬಿಡುಗಡೆಗೆ ಏಕರೂಪದ ನೀತಿ ರೂಪಿಸಲು ನಿರ್ದೇಶಿಸಿದೆ
◈ ಇದನ್ನು ಸಂಬಂಧಿತ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳೊಂದಿಗೆ ಸಮನ್ವಯದಲ್ಲಿ ಮಾಡಬೇಕು.
ಒಳಗೊಂಡ ತತ್ವಗಳು
◈ ಮಾನವೀಯ ವ್ಯವಹಾರ ಮತ್ತು ಮಾನವ ಘನತೆಯ ಉಲ್ಲಂಘನೆ ತಡೆ.
ಆರ್ಟಿಕಲ್ 21 ಅಡಿಯಲ್ಲಿ ಘನತೆಯೊಂದಿಗೆ ಜೀವನದ ಹಕ್ಕು.

ಸುಪ್ರೀಂ ಕೋರ್ಟ್ ವಯಸ್ಸಾದ ಮತ್ತು ಅಂತಿಮ ಹಂತದ ಅನಾರೋಗ್ಯ ಪೀಡಿತ ಕೈದಿಗಳ ಅಕಾಲಿಕ ಬಿಡುಗಡೆಗೆ ಏಕರೂಪದ ನೀತಿ ರೂಪಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಷ್ಟು ಅವಧಿಯೊಳಗೆ ನಿರ್ದೇಶನ ನೀಡಿದೆ?
ಉತ್ತರ :- 3 ತಿಂಗಳು
ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, ವಯಸ್ಸಾದ ಮತ್ತು ಅಂತಿಮ ಹಂತದ ಅನಾರೋಗ್ಯ ಪೀಡಿತ ಕೈದಿಗಳ ಬಿಡುಗಡೆ ನೀತಿಯನ್ನು ಯಾರೊಂದಿಗೆ ಸಮನ್ವಯದಲ್ಲಿ ರೂಪಿಸಬೇಕು.?
ಉತ್ತರ :- ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳು (SLSAs)
4
🚩"THE HINDU NEWS PAPER"

ನಂದನ್ ನೀಲೇಕಣಿ ನೇತೃತ್ವದ ಪರೀಕ್ಷಾ ಸುಧಾರಣೆ ಟಾಸ್ಕ್ ಫೋರ್ಸ್

❗️ಹಿನ್ನೆಲೆ:-
ಇತ್ತೀಚಿನ NEET ಪೇಪರ್ ಲೀಕ್ ಮತ್ತು ಮರುಪರೀಕ್ಷೆಗಳು ಭಾರತದ ಪರೀಕ್ಷಾ ವ್ಯವಸ್ಥೆಯ ಸಮಗ್ರತೆಯ ಬಗ್ಗೆ ಗಂಭೀರ ಕಳವಳ ಹುಟ್ಟುಹಾಕಿವೆ.

❗️ಘೋಷಣೆ:-
ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಅಧಿಕಾರವುಳ್ಳ ಟಾಸ್ಕ್ ಫೋರ್ಸ್ ರಚನೆಯನ್ನು ಘೋಷಿಸಿದ್ದಾರೆ.
◉ ಇದನ್ನು ಮಾಜಿ UIDAI ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಶಿಕ್ಷಣ ಸಚಿವ ನಂದನ್ ನೀಲೇಕಣಿ ನೇತೃತ್ವ ವಹಿಸುತ್ತಾರೆ.
ಗುರಿ: ಪರೀಕ್ಷಾ ವ್ಯವಸ್ಥೆಯನ್ನು ಲೀಕ್-ಪ್ರೂಫ್, ಪಾರದರ್ಶಕ ಮತ್ತು ತಂತ್ರಜ್ಞಾನ-ಆಧಾರಿತವಾಗಿ ಮಾಡುವುದು

❗️ಸಂಯೋಜನೆ:-
ತಂತ್ರಜ್ಞಾನ, ಶಿಕ್ಷಣ, ಕಾನೂನು,ಆಡಳಿತ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದ ತಜ್ಞರು ಒಳಗೊಂಡಿದ್ದಾರೆ.
◉ ಮಾಜಿ ISRO ಅಧ್ಯಕ್ಷ ಎಸ್. ಸೋಮನಾಥ್
◉ IIT-ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ
◉ ಇತರ ಡೊಮೇನ್ ತಜ್ಞರು

❗️ಮುಖ್ಯ ಸಂದೇಶ:
“ನ್ಯಾಯಯುತ ಪರೀಕ್ಷಾ ವ್ಯವಸ್ಥೆ ನ್ಯಾಯಯುತ ಸಮಾಜವನ್ನು ನಿರ್ಮಿಸುತ್ತದೆ.”
6
🚩"THE HINDU NEWS PAPER"

🖍 ಸುಪ್ರೀಂ ಕೋರ್ಟ್ – ಶಿವಸೇನೆ (UBT) ಸಂಸದರ ವಿಲೀನ ಪ್ರಕರಣ (UPSC/KPSC/KSP/KEA ಪರೀಕ್ಷೆಗೆ ಪ್ರಮುಖ ಅಂಶಗಳು)

✏️ಏಕೆ ಸುದ್ದಿಯಲ್ಲಿ?

ಶಿವಸೇನೆ (UBT) ಪಕ್ಷದ 6 ಲೋಕಸಭಾ ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಂಡಿದ್ದಾರೆ.
◈ ಈ ವಿಲೀನಕ್ಕೆ ಲೋಕಸಭಾ ಸ್ಪೀಕರ್ ಮಾನ್ಯತೆ ನೀಡಿದ್ದರು.
◈ ಇದನ್ನು ಪ್ರಶ್ನಿಸಿ ಶಿವಸೇನೆ (UBT) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು.
◈ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ (Interim Stay) ನೀಡಲು ನಿರಾಕರಿಸಿದೆ.
◈ ಆದರೆ ಪ್ರಕರಣದ ವಿಚಾರಣೆಯನ್ನು 2 ವಾರಗಳ ಬಳಿಕ ನಡೆಸಲು ಒಪ್ಪಿದೆ.

❗️ಪ್ರಮುಖ ಸಂವಿಧಾನಾತ್ಮಕ ಅಂಶಗಳು

10ನೇ ಅನುಸೂಚಿ (Tenth Schedule) – ಪಕ್ಷಾಂತರ ನಿಷೇಧ ಕಾಯ್ದೆ.
ಅನುಚ್ಛೇದ 102 – ಸಂಸದರ ಅನರ್ಹತೆ
◈ ಸದಸ್ಯರ ಅನರ್ಹತೆಯ ಬಗ್ಗೆ ಸ್ಪೀಕರ್ ನಿರ್ಧಾರ ಕೈಗೊಳ್ಳುತ್ತಾರೆ.
◈ ಸ್ಪೀಕರ್‌ನ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ (Judicial Review) ಒಳಪಡುತ್ತದೆ.

❗️ಪಕ್ಷಾಂತರ ನಿಷೇಧ ಕಾಯ್ದೆ
52ನೇ ಸಂವಿಧಾನ ತಿದ್ದುಪಡಿ (1985) ಮೂಲಕ ಜಾರಿಗೆ ಬಂತು.
10ನೇ ಅನುಸೂಚಿ ಸೇರಿಸಲಾಯಿತು
91ನೇ ಸಂವಿಧಾನ ತಿದ್ದುಪಡಿ (2003) ಮೂಲಕ 1/3 ಸದಸ್ಯರ ವಿಭಜನೆಗೆ ಇದ್ದ ರಕ್ಷಣೆ ತೆಗೆದುಹಾಕಲಾಯಿತು
◈ ಈಗ ಕನಿಷ್ಠ 2/3 ಸದಸ್ಯರು ಒಪ್ಪಿದರೆ ಮಾತ್ರ ವಿಲೀನಕ್ಕೆ ರಕ್ಷಣೆ ದೊರೆಯುತ್ತದೆ.

Continue...
4
❗️ಮಹತ್ವ

◈ ಪಕ್ಷಾಂತರ ಕಾನೂನಿನ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ.
◈ ಸ್ಪೀಕರ್‌ನ ಅಧಿಕಾರ ಹಾಗೂ ನ್ಯಾಯಾಂಗದ ಮೇಲ್ವಿಚಾರಣೆಯನ್ನು ಸ್ಪಷ್ಟಪಡಿಸುತ್ತದೆ
◈ ಸಂಸತ್ತಿನ ಸ್ಥಿರತೆ ಹಾಗೂ ರಾಜಕೀಯ ನೈತಿಕತೆಯನ್ನು ಕಾಪಾಡುವ ಪ್ರಕರಣವಾಗಿದೆ.

❗️ಪ್ರಮುಖ ತೀರ್ಪುಗಳು

Kihoto Hollohan v. Zachillhu (1992)– ಸ್ಪೀಕರ್‌ನ ನಿರ್ಧಾರ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿದೆ.
Keisham Meghachandra Singh (2020) – ಅನರ್ಹತೆ ಅರ್ಜಿಗಳ ತ್ವರಿತ ವಿಲೇವಾರಿ ಕುರಿತು ಮಾರ್ಗಸೂಚಿ.
Subhash Desai v. Principal Secretary (2023) – ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಮಹತ್ವದ ತೀರ್ಪು.
2
🚩"The Lines of Life"

1.To criticize
(ಟೀಕೆ ಮಾಡಲು -ಅತಿ ಉದ್ದದ ಸಾಲು)
- ಅರ್ಥ:ಇತರರ ಲೋಪದೋಷಗಳನ್ನು ಹುಡುಕಲು,ತಪ್ಪುಗಳನ್ನು ಎತ್ತಿ ತೋರಿಸಲು ಮತ್ತು ಟೀಕಿಸಲು ಸಮಾಜದಲ್ಲಿ ಅತಿ ಹೆಚ್ಚು ಜನರಿದ್ದಾರೆ.

2.To gossip
(
ಚಾಡಿ / ಹರಟೆ ಹೊಡೆಯಲು - ದೊಡ್ಡ ಸಾಲು)
- ಅರ್ಥ:ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದು,ಇಲ್ಲಸಲ್ಲದ ಹರಟೆ ಹೊಡೆಯುವುದು ಮತ್ತು ಚಾಡಿ ಹೇಳುವುದಕ್ಕೆ ಸಾಕಷ್ಟು ಜನರು ಆಸಕ್ತಿ ತೋರಿಸುತ್ತಾರೆ.

3.To get involved
(ನೇರವಾಗಿ ಭಾಗಿಯಾಗಲು - ಸಾಧಾರಣ ಸಾಲು)

- ಅರ್ಥ:ಯಾವುದೇ ಸಮಸ್ಯೆಗೆ ಸ್ಪಂದಿಸಿ, ಸ್ವತಃ ಕೆಲಸದಲ್ಲಿ ತೊಡಗಿಸಿಕೊಳ್ಳಲು ಕೇವಲ ಕೆಲವೇ ಕೆಲವರು ಮುಂದೆ ಬರುತ್ತಾರೆ.

4.To encourage
(ಪ್ರೋತ್ಸಾಹಿಸಲು - ಬೆರಳೆಣಿಕೆಯಷ್ಟು ಜನ)

- ಅರ್ಥ:ಇತರರ ಶ್ರಮವನ್ನು ಗುರುತಿಸಿ, ಅವರಿಗೆ ಧೈರ್ಯ ತುಂಬಿ ಪ್ರೋತ್ಸಾಹಿಸುವ ಮನಸ್ಸು ಉಳ್ಳವರು ಬಹಳ ವಿರಳ.

5.To help
(ನಿಜವಾಗಿ ಸಹಾಯ ಮಾಡಲು - ಕೇವಲ ಒಬ್ಬರು)
ಅರ್ಥ
: ಕಷ್ಟದಲ್ಲಿದ್ದಾಗ ನಿಜವಾದ ನೆರವು ನೀಡಲು ಅಥವಾ ಸಹಾಯ ಹಸ್ತ ಚಾಚಲು ಯಾರೂ ಮುಂದೆ ಬರುವುದಿಲ್ಲ

👉 ಸಮಾಜದಲ್ಲಿ ಟೀಕೆ ಮಾಡುವವರು ಮತ್ತು ಹರಟೆ ಹೊಡೆಯುವವರ ಸಂಖ್ಯೆ ಅಪಾರವಾಗಿದೆ.ಆದರೆ,ಇತರರಿಗೆ ಸಹಾಯ ಮಾಡುವ ಹಾಗೂ ಪ್ರೋತ್ಸಾಹಿಸುವ ಒಳ್ಳೆಯ ಮನಸ್ಸುಳ್ಳವರು ಅತಿ ವಿರಳ.ನಾವೆಲ್ಲರೂ ಟೀಕಿಸುವ ಸಾಲಿನಲ್ಲಿ ನಿಲ್ಲದೆ,ಸಹಾಯ ಮಾಡುವ ಮತ್ತು ಪ್ರೋತ್ಸಾಹಿಸುವ ಸಾಲಿನಲ್ಲಿ ನಿಲ್ಲಲು ಪ್ರಯತ್ನಿಸಬೇಕು.
6
🌿ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ವಿಮಾನ ನಿಲ್ದಾಣ.??
ಪ್ರಸ್ತುತ ಅತ್ಯಂತ ಎತ್ತರದ ವಿಮಾನ ನಿಲ್ದಾಣ ಡಾವೊಚೆಂಗ್ ಯಾಡಿಂಗ್ (Daocheng Yading Airport, ಚೀನಾ) – 4,411 ಮೀ.
2
ಕನ್ನಡದಲ್ಲಿ ಬರುವಂತಹ ಪ್ರಜಾವಾಣಿ ಪತ್ರಿಕೆ ಮತ್ತು ಇನ್ನಿತರ ಪತ್ರಿಕೆ ಹಾಕುವುದರಿಂದ copyright issue ಬರ್ತಾ ಇದೆ ಅದಕ್ಕಾಗಿ ನಾವು ಈ ಗ್ರೂಪಲ್ಲಿ ಹಾಕ್ತಾ ಇಲ್ಲ ಅದರ ಜೊತೆಗೆ ಇಂಗ್ಲೀಷ್ ಪ್ರಚಲಿತ ಘಟನೆ ಕೂಡ ಬೇರೆ ಗ್ರೂಪಲ್ಲಿ ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ

https://t.me/kasmastermindenglish
🌳ಕರ್ನಾಟಕದಲ್ಲಿ SC/ST ಮೀಸಲಾತಿ ಪ್ರಮಾಣ ಹೆಚ್ಚಳ (2022)

ಹಿನ್ನೆಲೆ:
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು 2022 ರಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿತು.

SC (ಪರಿಶಿಷ್ಟ ಜಾತಿ) ಮೀಸಲಾತಿ:
%15 ರಿಂದ %17 ಕ್ಕೆ ಹೆಚ್ಚಳ.
ST (ಪರಿಶಿಷ್ಟ ಪಂಗಡ) ಮೀಸಲಾತಿ:
%3 ರಿಂದ %7 ಕ್ಕೆ ಹೆಚ್ಚಳ.

ನ್ಯಾಯಾಂಗ ತಡೆ (Interim Stay):
ಹೈಕೋರ್ಟ್ ಈ ಹೆಚ್ಚುವರಿ ಮೀಸಲಾತಿಯ
(%2 SC + %4 ST = ಒಟ್ಟು %6) ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಿದೆ.

🪴ಪ್ರಮುಖ ಸಂವಿಧಾನಾತ್ಮಕ ವಿಧಿಗಳು

ವಿಧಿ 15(4):
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಅಥವಾ SC/ST ಗಳ ಪ್ರಗತಿಗಾಗಿ ವಿಶೇಷ ಉಪಬಂಧಗಳನ್ನು ಮಾಡಲು ರಾಜ್ಯಕ್ಕೆ ಅಧಿಕಾರ ನೀಡುತ್ತದೆ.
ವಿಧಿ 16(4):
ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯವಿಲ್ಲದ ಹಿಂದುಳಿದ ನಾಗರಿಕರ ವರ್ಗಗಳಿಗೆ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸಲು ಅವಕಾಶ ನೀಡುತ್ತದೆ
ವಿಧಿ 16(4A):
SC/ST ಸಮುದಾಯಗಳಿಗೆ ಮುಂಬಡ್ತಿಯಲ್ಲಿ (Promotions) ಮೀಸಲಾತಿ ನೀಡಲು ಅವಕಾಶ.
ವಿಧಿ 335:
ಸರ್ಕಾರಿ ಸೇವೆಗಳಲ್ಲಿ SC ಮತ್ತು ST ಗಳ ಹಕ್ಕು ಪ್ರತಿಪಾದನೆಗಳನ್ನು ಪರಿಗಣಿಸುವಾಗ ಆಡಳಿತ ದಕ್ಷತೆಯನ್ನು (Efficiency of Administration) ಕಾಯ್ದುಕೊಳ್ಳುವುದು.
7
current affairs related topic revision

1) ಭಾರತ ಸಂವಿಧಾನ
2) ಭೂಗೋಳಶಾಸ್ತ್ರ
3) ಅಂತರಾಷ್ಟ್ರೀಯ ಸಂಬಂಧ

ನಿನ್ನೆ ನಡೆದಂತ ಅರ್ಥಶಾಸ್ತ್ರ ರಿವಜನನ್ನು ಯೂಟ್ಯೂಬಲ್ಲಿ ದೊರಕುತ್ತದೆ

ಕಂಪ್ಲೀಟ್ ಆಗಿ ನ್ಯೂಜನನ್ನು ಯೂಟ್ಯೂಬ್ ಮತ್ತು ಯಾಪಿನಲ್ಲಿ ಎಲ್ಲವನ್ನು ಸಿಗುತ್ತದೆ ಸರಿಯಾಗಿ ಸದುಪಯೋಗವನ್ನು ಪಡಿಸಿಕೊಳ್ಳಿ

YouTube link

https://www.youtube.com/@KASMASTERMIND-x5n


APP's link


Play Store link

Check out "KAS MASTERMIND"
https://play.google.com/store/apps/details?id=com.jdbcko.nwvusy
1