Panchajanya IAS (Official)
23.5K subscribers
2.36K photos
150 videos
767 files
1.47K links
Panchajanya IAS
UNIQUE - VERSATILE - VISIONARY
ಬಲ ನಿಮ್ಮದು ಬೆಂಬಲ ನಮ್ಮದು!!
We Produce Leaders! 🔥

www.panchajanyaias.com
www.kannadaiasacademy.com

YouTube : https://youtube.com/@panchajanyaias
Download Telegram
⚠️ Warning : ಕೆಲವು ಕಠಿಣ ಪದಗಳನ್ನು ಬಳಸಲಾಗಿದೆ.
ಅರಗಿಸಿಕೊಳ್ಳುವವರು ಮಾತ್ರ ಓದಿ.

ಕನ್ನಡದ KAS ಆಕಾಂಕ್ಷಿಗಳೇ,

1. ಇಂಗ್ಲಿಷ್ ಕಲಿಯಿರಿ

ಕನ್ನಡ ಭಾಷೆಯಲ್ಲಿ KAS ಬರೆದರೆ ನೀವು ಸತ್ರೂ KAS ಪಾಸ್ ಆಗಲ್ಲ. ಅಲ್ಲಿ ನಡಿತಿರೊ ಆಟಗಳೇ ಬೇರೆ.

ಕುರುಡು ಕಾಂಚಾಣ "ಹೇ, ಜಿಂಗಲಕ್ಕ ಜಿಂಗಲಕ್ಕ ಬಾ" ಅಂತ ಕುಣಿಯೋವಾಗ, ಕನ್ನಡಮ್ಮನನ್ನ, ಅವಳ ಮಕ್ಕಳನ್ನ ಕೇರ್ ಮಾಡೋರು ಯಾರೂ ಇಲ್ಲ.

ಹಿಂದೆ ಇಂಟರ್ನೆಟ್ ಇರಲಿಲ್ಲ, ಈಗ ಸಾಕಷ್ಟು Source ಇದೆ. ಹಾಗಾಗಿ ತೆಪ್ಪಗೆ ಕುಳಿತು Panchajanya IAS YouTube channel ನಲ್ಲಿನ Grammar + Yuvaraj madha sir Spoken English ಕೇಳಿ.

(Sir ನನಗೆ ಇಂಗ್ಲಿಷ್ ಬರಲ್ಲ ಅಂತ ಯಾರಾದ್ರೂ ಅಂದ್ರೆ Block ಮಾಡಿ ಬಿಡ್ತಿನಿ, ಹುಷಾರ್,
ನಿಮ್ಮ ಒಳ್ಳೆಯದಕ್ಕೇ ಕಣ್ರಪ್ಪಾ ಹೇಳ್ತಿರೋದು. ಅರ್ಥಾ ಮಾಡ್ಕೊಳ್ಳಿ.)

2. ದುಡಿದು ಬೆಳೆದು ಶ್ರೀಮಂತರಾಗಿ.

(ಕೋರ್ಟಿಗೆ ಹೋದ್ರೆ ನ್ಯಾಯ ಬಹುತೇಕ ಸಿಗುತ್ತದೆ, ಆದರೆ ಒಳ್ಳೆಯ ವಕೀಲರಿಗೆ ತುಂಬಾ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ದುಡಿದು ಬೆಳೆಯಿರಿ.)

3. KAS ನಂಬಿ ಕೂರಬೇಡಿ.
UPSC ಗೆ ಓದಿ.

ನಮ್ಮ ಕಣ್ಮುಂದೆಯೇ ನಿಮಗೆ ಅನ್ಯಾಯವಾಗಿದೆ ಎಂದು ಗೊತ್ತು. ಈಗಲೂ ಆಗುತ್ತಿದೆ.

ಏನ್ ಮಾಡೋದು,

ರಾಜಕಾರಣದಲ್ಲಿ ಒಳ್ಳೆಯವರು ಬರೋವರೆಗೂ ಇದು ಸುಧಾರಣೆ ಆಗಲ್ಲ.

ಇದು ರಾಜರ ಕಾಲವಾಗಿದ್ರೆ,
ಕದಂಬರ ಮಯೂರನ ಹಾಗೆ
ಸೀಳಿಬಿಡಬಹುದಿತ್ತು!

ಇಂದು,
ಹಣದಮುಂದೆ ಕನ್ನಡ ಹೆಣವಾಗಿದೆ.

ಇಲ್ಲಿ ಭಾವನೆಗಳಿಗಿದ್ದ ಬೆಲೆ ಸತ್ತುಹೋಗಿದೆ.

ಕಾಂಚಾಣದ ಮುಂದೆ ಕನ್ನಡ ಸೋತಿದೆ.

3 ತಿಂಗಳು IPL - RCB
3 ತಿಂಗಳು Big-Boss
3 ತಿಂಗಳು ಕಾಮಿಡಿ ಕಿಲಾಡಿ
3 ತಿಂಗಳು ಇನ್ಯಾವುದರಲ್ಲೋ
ಕಾಲ ಕಳೆಯೋ ಜನರಿಗೆ ಇದು ಅರ್ಥವಾಗಲ್ಲ.

ಅರ್ಥವಾಗುವ ನಿಮಗೆ ಆತ್ಮವಿಶ್ವಾಸವಿಲ್ಲ,
ಬರೀ ಸಂಕೋಚ,
ನಾಚಿಕೆ
ಅಂಜಿಕೆ

"ಯಾರ್ ಏನಾದ್ರು ಅಂದ್ರೆ?"
ಅನ್ನೋ ಈ ಹುಳ
ಗೆದ್ದಲಿನ ಹಾಗೆ ನಿಮ್ಮನ್ನ ಹಾಳು ಮಾಡಿದೆ.

ಹೂಂ.
ಅನ್ಲಿ ಸಾವಿರ ಜನ ಸಾವಿರ ಅನ್ಲಿ ರೀ,
ಏನ್ ನಿಮ್ ಹೊಟ್ಟೆಗೆ ಅವ್ರ ಹಾಕೋದಾ ಇಲ್ಲಾ ನಿಮ್ಮ ಅಪ್ಪ ಅವ್ವ ನಾ?

ನೀವ್ ಉತ್ತರ ಕೊಡಬೇಕಿರೋದು ನಿಮಗೆ ಅನ್ನ ಹಾಕಿದವರಿಗೆ ಮಾತ್ರ.

ಹಾದಿಬೀದಿ ಬಾಯ್ ಬಡುಕರಿಗೆ ಅಲ್ಲ.

ಅಯ್ಯೋ,
ಹೋಗಿ ಒಂದ್ ಹುಡುಗಿನ ಪ್ರೊಪೋಸ್ ಮಾಡೋಕ್ ಆಗದೇ ಇರೋ ನಿಮ್ಮಿಂದ್ ಇನ್ನೇನಾಗುತ್ತದೆ ಹೇಳಿ?

ಲೈಬ್ರರಿಯಲ್ಲಿ ಕೂತು ಕೂತು
ಶುದ್ಧ ಶಿಖಂಡಿಗಳಾಗಿದೀರಿ.

ಪೌರುಷ ಅರ್ಥಾತ್ ಗಂಡಸುತನ ಅನ್ನೋ ಪದ ಇದೆ ಅಂತಾ ಗೊತ್ತಾ? ಎಲ್ಲಾದ್ರೂ ಕೇಳಿದೀರಾ?

(ಇಲ್ಲಾ ಅಂದ್ರೆ ಇವತ್ತೇ ರಾಜಕುಮಾರ್ ಅವರ ಬಬ್ರುವಾಹನ +ಮಯೂರ ಸಿನಿಮಾ ನೋಡಿ)

ಹೆಣ್ಮಕ್ಳು ವೀರ ವನಿತೆ ಅಂತಾ ಕೇಳಿದೀರಾ?
ಇಲ್ಲ ಅಂದ್ರೆ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವನ ಕತೆ ಇನ್ನೊಮ್ಮೆ ಕೇಳಿ.

ಏನ್ ಕಾಲ ಬಂತಪ್ಪಾ.

ಕೈಲಾಸನಾಥ ದೇವಾಲಯ ಕಟ್ಟಿದ ಕನ್ನಡಿಗರಿಗೆ ತಮ್ಮ ಮೇಲೆ ಅನುಮಾನ.

ವಿಜಯನಗರದ ಕಾಲದಲ್ಲಿ ಮುತ್ತು ರತ್ನ ಮಾರಿದವರಿಗೆ ಬಿಸಿನೆಸ್ ಮಾಡಲು ಹಿಂಜರಿಕೆ.

ಛೇ! ಛೆ!

ಇದಕ್ಕಾಗಿ ನಿಮ್ಮ ಅಪ್ಪ ಅಮ್ಮ ನಿಮ್ಮನ್ನ ಹೊತ್ತು ಹೆತ್ತು ಸಾಕಬೇಕಿತ್ತಾ?

ಭೂಮಿಗೆ ಭಾರ ಆಗೋಕೆ?

ನಾಚಿಕೆ ಆಗಲ್ವಾ ನಿಮಗೆ?

ಏಳಿ ಎದ್ದೇಳಿ,
ಓದ್ರಿ, ದುಡೀರಿ
YouTube + internet ಬಳಸಿ ದುಡಿಯಿರಿ ಕೋಟ್ಯಾಧಿಪತಿಗಳಾಗಿ.

10% ಆದ್ರೂ ಬಡವರಿಗೆ ಸಹಾಯ ಮಾಡಿ.

ಧಂ ಇದ್ರೆ ಧೈರ್ಯದಿಂದ ಬದುಕಿ.

ಇಲ್ಲ ಮುಚ್ಕೊಂಡ್ ಎಲ್ಲಾದ್ರು ಒಂದ್ ಹಳ್ಳಿ ಮೂಲೇಲಿ ಕೂಲಿ ಮಾಡ್ಕೊಂಡ್ ಇರ್ಹೋಗಿ.

ಇಲ್ಲಿ ಶಕ್ತಿ ಇಲ್ಲ ಅಂದ್ರೆ ಕೆಲಸ ಆಗಲ್ಲ!

ಈ ಮಾತುಗಳು ನಿಮಗೆ ಹರ್ಟ್ ಮಾಡಿದ್ರೆ,
ನಾನೇನ್ Sorry ಕೇಳಲ್ಲ.

ನಿಮ್ ದಾರಿ ನೀವ್ ನೋಡಿಕೊಳ್ಳಬಹುದು.

ನಮಗೆ, ಗುಂಡಿಗೆ ಇರೋ ಒಬ್ಬ ಇದ್ರುನೂ ಸಾಕು.
-
ಪ್ರವೀಣ ಮ ಮಗದುಮ್ಮ

ಇಂದಿನಿಂದಲೇ ಬದಲಾಗ್ತೀನಿ ಅಂತಿದ್ರೆ,
ನಿಮ್ ಎದೆ ಮುಟ್ಕೊಂಡು ಆಣೆ ಮಾಡಿ,
Hit 🔥 👇
💫 🌳
UPSC 2024 AIR - 551

ಮರಾಠಿ ಮಿಶ್ರಿತ,
ಜವಾರಿ ಕನ್ನಡದಲ್ಲಿ,
ಈ ಕುರುಬರ ಹೈದನ ಸಾಧನೆ
ಒಮ್ಮೆ ಕೇಳಿ...
(ಆತ Social media ಬಗ್ಗೆ
ಹೇಳಿದ್ದು ಕೇಳಿ, ಪಾಲಿಸಿ.)
👇
https://youtu.be/2OJk1W4tB08?si=Kuy23gQhOA6BPHnA
ಅದ್ಯಾಕೋ ಗೊತ್ತಿಲ್ಲ ಕೆಲ Topper ಗಳು ಮಾತ್ರ ಸತ್ಯ ಹೇಳುತ್ತಾರೆ!

ಇನ್ ಕೆಲವರು,
ನಾನು ಕೊಚಿಂಗ್ ತೆಗೆದುಕೊಂಡಿಲ್ಲ,
ದಿನಕ್ಕೆ 15 ಗಂಟೆ ಓದುತ್ತಿದ್ದೆ,
ಹೀಗೆ ಪಾಸಾದಮೇಲೆ ಸಾಲು ಸಾಲು ಸುಳ್ಳು ಹೇಳುತ್ತಾರೆ!

ಯಾಕಂದ್ರೆ ಗೆಲುವನ್ನು ಯಾರೂ ಪ್ರಶ್ನೆ ಮಾಡಲ್ಲ!

It's ok.

ಬೀರದೇವ ಸತ್ಯ ಹೇಳಿದ್ದು ನೋಡಿ ಖುಷಿ ಆಯ್ತು.

ಇವರು ಪುಣೆಯಲ್ಲಿ ಇಂಜಿನಿಯರಿಂಗ್ ಮುಗಿಸಿ ಅಲ್ಲಿನ UPSC ಟಾಪರ್ ಗಳನ್ನು ನೋಡಿ ನಾನೂ IAS ಆಗಬೇಕಂತ

ದೆಹಲಿಗೆ ಹೋಗಿ ಕೊಚಿಂಗ್ ತೆಗೆದುಕೊಂಡ್ರು.

ಪುಣೆಗೆ ವಾಪಸಾದ ಮೇಲೆ ಇನ್ನೊಮ್ಮೆ ಕೋಚಿಂಗ್ ತೆಗೆದುಕೊಂಡ್ರು!

ಇದರರ್ಥ ಇಷ್ಟೇ,

ಕೋಚಿಂಗ್ ತೆಗೆದುಕೊಳ್ಳೋದು ಮುಖ್ಯವಲ್ಲ ಅಲ್ಲಿ ಕಲಿಯೋದು ಮುಖ್ಯ.

ಕೋಚಿಂಗ್ ತೆಗೆದುಕೊಂಡಿಲ್ಲ ಅಂತಾ ಹೇಳೋ ಬಹುಪಾಲು ಜನರ ಅಣ್ಣ ತಮ್ಮನೋ ಅಥವಾ ಆಪ್ತ ಸ್ನೇಹಿತರೋ ಅಥವಾ BF/GF ಅಥವಾ ಸಂಬಂಧಿಕರೊ IAS/IPS ಇರ್ತಾರೆ, ಎಳೆಯೆಳೆಯಾಗಿ ಮಾರ್ಗದರ್ಶನ ಮಾಡುತ್ತಾರೆ.

ಇದು ತಿಳಿಯದ ಮುಗ್ಧ ವಿದ್ಯಾರ್ಥಿಗಳು,
"ಏ UPSC ಗೆ ಕೋಚಿಂಗ್ ಅಗತ್ಯ ಇಲ್ಲ" ಅಂತ topper ಹೇಳಿದ್ದಾರೆ ಅಂತಾ ಕುಣಿಯುತ್ತ,
Library ಯಲ್ಲಿ 3 ವರ್ಷ ತಪಸ್ಸು ಮಾಡಿದರೂ UPSC ಒಲಿಯಲ್ಲ!

ಆಗ, ಕೋಚಿಂಗ್ ಮಾಡಬೇಕೆಂದರೇ,
ಪದೇ ಪದೇ ಓದಿದ ಮೇಲೆ
ಕ್ಲಾಸ್ ಕೇಳಲು ನಿರಾಸಕ್ತಿ!

UPSC ತಯಾರಿ ಮೇಲೇಯೇ ಜಿಗುಪ್ಸೆ!

10-12 ವರ್ಷಗಳ ಹಿಂದೆ UPSC ಕೊಚಿಂಗ್ ಗೆ ದೆಹಲಿಗೇ ಹೋಗಬೇಕಿತ್ತು.

ಈಗ
ಹೈದರಾಬಾದ್ ಇದೆ
ಬೆಂಗಳೂರಿದೆ,
ಬೆಳಗಾವಿಯೂ ಇದೆ.
(ಅಪ್ಪಿ ತಪ್ಪಿ ಕೂಡ UPSC ಮಾಡಲು ಧಾರವಾಡಕ್ಕೆ ಹೋಗಬೇಡಿ)

Offline ಆಗುತ್ತಿಲ್ಲ ಅಂದ್ರೆ online ತೆಗೆದುಕೊಳ್ಳಿ,
Digital ಶಿಕ್ಷಣ ಕ್ರಾಂತಿಯಿಂದ UPSC Complete ಕೋಚಿಂಗ್ ಕೇವಲ 10,000 ದಲ್ಲಿ ಸಿಗುತ್ತದೆ.

ಇದೆಲ್ಲ Admission ಗಿಮಿಕ್ ಅನ್ನೋರು,

At least,
YouTube ನಲ್ಲಿ ಇರುವ ತರಗತಿಗಳನ್ನಾದರೂ ಕೇಳಿ ತಯಾರಿ ಮಾಡಿ.

ದೊಡ್ಡ ದೊಡ್ಡ ಪುಸ್ತಕ ಹಿಡಿದು ಕೂತರೆ ನೀವೇನು ವೇದಾಂತಿಗಳಾಗಲ್ಲ. UPSC ಗೆ ಬೇಕಾಗಿರೋದು ಆಡಳಿತಗಾರರೇ ಹೊರತು,
ವೇದಾಂತಿಗಳಲ್ಲ.

ನೋಡಿ ಯೋಚಿಸಿ.

ಕುರಿಯ ಹಾಗೆ,
Topper ಗಳನ್ನು ಹಿಂಬಾಲಿಸೋ ಬದಲು.

ನೀವೂ ಸ್ವಲ್ಪ ಯೋಚಿಸಿ.

ಅಂದಹಾಗೆ,

2018 ರಲ್ಲಿ ತಯಾರಿ ಆರಂಭಿಸಿದ್ದ ಕನಿಷ್ಕ ಕಟಾರಿಯಾ 2019 ರಲ್ಲಿ ಬಂದ ಫಲಿತಾಂಶದಲ್ಲಿ 1st Rank ಬಂದಿದ್ದರು.

ಅದೇ 2018 ರಲ್ಲಿ ಆರಂಭಿಸಿದ್ದ ಶಕ್ತಿ ದುಬೆ 2025 ಕ್ಕೆ 1st Rank ಬಂದಿದ್ದಾರೆ.

ಇಬ್ಬರದೂ Vajiram & Ravi ಯಲ್ಲೇ ಕೋಚಿಂಗ್ ಆದದ್ದು.

ಕನಿಷ್ಕ 1 ವರ್ಷ ತೆಗೆದುಕೊಂಡರೆ,
ಶಕ್ತಿ ಬರೊಬ್ಬರಿ 7 ವರ್ಷ ತೆಗೆದುಕೊಂಡರು!

ಯಾಕಂದ್ರೆ,
ಕನಿಷ್ಕ ಕಟಾರಿಯಾರ ತಂದೆ IAS ಅಧಿಕಾರಿ.
ಶಕ್ತಿ ದುಬೆಯವರ ತಂದೆ Sub inspector.

Guidance is important!
-
ಪ್ರವೀಣ ಮ ಮಗದುಮ್ಮ
Panchajanya IAS, Belagavi

ಅರ್ಥ ಆಗಿದ್ರೆ 👇
❤️
💫
Our Student covering Subjects 1 by 1!

Join Panchajanya IAS classes
for systematic study!
It's Exclusively for IAS! 🌳

Contact Details:
Cell No/WhatsApp : 9481837426
Gmail :
Panchajanyaias@gmail.com
Monday to Saturday
Timings : 10am to 5pm

Sunday Holiday

App:
https://play.google.com/store/apps/details?id=com.ekajos.prvqxf
KAS Update

AKSSA & AKSARA ಎರಡೂ ತಂಡಗಳು ಈಗಲೂ ಎಡೆಬಿಡದೆ KAS ಸ್ಪರ್ಧಾಕಾಂಕ್ಷಿಗಳಿಗೆ ನ್ಯಾಯ ಕೊಡಲು ಶ್ರಮಿಸುತ್ತಿವೆ.

ಇವರ ಶ್ರಮಕ್ಕೆ ಫಲ ಸಿಗಲಿ ಎಂದು ಕನ್ನಡ ಮಾತೆಯಲ್ಲಿ ಪ್ರಾರ್ಥಸಿ, ಹಾರೈಸುತ್ತೇವೆ.

ಹಾಗೆಯೇ, ಸರ್ಕಾರ ವಿದ್ಯಾರ್ಥಿಗಳಿಗೆ ನ್ಯಾಯ ನೀಡುವ ಮನಸ್ಸು ಮಾಡಲೆಂದು ಆಗ್ರಹಿಸುತ್ತೇವೆ.

ಮುಖ್ಯ ಮಂತ್ರಿಗಳು ಮನಸ್ಸು ಮಾಡಿದರೆ ಇದೇನು ದೊಡ್ಡ ಕೆಲಸವೂ ಅಲ್ಲ.

ಇನ್ನು, ಈಗ ನ್ಯಾಯ ಸಿಕ್ಕರೆ ಒಳಿತು.

ಸಿಗದಿದ್ದರೆ, ಮುಂದಿನ ವರ್ಷಗಳಲ್ಲಿ KPSC ಗೆ ಸಂವಿಧಾನ ಬದ್ಧವಾಗಿ ಹೇಗೆ ಬುದ್ಧಿ ಕಲಿಸಬೇಕೆಂದು ಗೊತ್ತಿದೆ ಹಾಗೆ ಕಲಿಸುತ್ತೇವೆ.

ದಶಕಗಳಿಂದ ಅಲುಗಾಡದೆ ಬಂಡೆಗಳಂತೆ ಕೂತಿರುವ ಮಾನವೀಯತೆಯೇ ಇಲ್ಲದ ಅಯೋಗ್ಯರನ್ನು ಹೊರಗಟ್ಟಿ ಯೋಗ್ಯರನ್ನು ಪ್ರತಿಷ್ಠಾಪಿಸುತ್ತೇವೆ.

It's Our Promise!

ಕನ್ನಡಿಗರೇ,
ಒಬ್ಬನಿಂದ ಏನಾದೀತು ಅಂತಾ ಚಿಂತೆ ಮಾಡಬೇಡಿ,

ಬನವಾಸಿಯ ಜಗತ್ಪ್ರಸಿದ್ಧ ಕದಂಬ ಸಾಮ್ರಾಜ್ಯವನ್ನು ಕಟ್ಟಿದ್ದು ಮಯೂರ ಒಬ್ಬನೇ!

ಭಾರತವನ್ನು ಶತಮಾನಗಳ ಕಾಲ ಆಳಿದ ಮೌರ್ಯ ಸಾಮ್ರಾಜ್ಯ ಕಟ್ಟಿದ್ದು ಚಂದ್ರಗುಪ್ತ ಒಬ್ಬನೇ!

ಭಾರತದ ಮೇಲೆ ದಾಳಿ ಮಾಡಿ ಬಂದಾಗ ಇದ್ದದ್ದು ಬಾಬರ್ ಒಬ್ಬನೆ!

ಜಗತ್ತನ್ನೇ ಆಳುತ್ತೇನೆಂದು ಹೊರಟಾಗ ಇದ್ದದ್ದು ಅಲೆಕ್ಸಾಂಡರ್ ಒಬ್ಬನೆ!

ಆಡಳಿತದಲ್ಲಿ
ಭ್ರಷ್ಟಾಚಾರ ಇರೋದೆ, ಆದ್ರೆ 10% ಸಾಕು! ಅದನ್ನ ಮೀರಿ, 0.1 ಕೂಡ ಆಗ ಕೂಡದು!

ಮುಂದಿನ ದಿನಗಳಲ್ಲಿ ನಮಗೆ...

ಪ್ರಾಮಾಣಿಕ - ಸಮಾಜವಾದಿ
1. ಅಧಿಕಾರಿಗಳು
2. ವಕೀಲರು
3. ಬಿಸ್ನೆಸಮನ್ ಗಳು
4. ರಾಜಕಾರಣಿಗಳು
5. ಸಮಾಜ ಸೇವಕರು...
6. ಇತ್ಯಾದಿ... ಬೇಕು...

ನಿಮಗೆ ಯಾವ್ ಯಾವ್ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅಲ್ಲಿ ದುಡಿದು ಬೆಳೆದು ನಿಲ್ಲಿ.

ಒಂದ್ 10 ವರ್ಷ ಬಿಟ್ಟು ಒಂದ್ ಕ್ರಾಂತಿ ಮಾಡೋದಿದೆ!

ಅಲ್ಲಿಯವರೆಗೂ ಚೆನ್ನಾಗಿ ಓದಿ,
ಸಿಕ್ಕಾಪಟ್ಟೆ ದುಡಿಯಿರಿ,
ಆರ್ಥಿಕವಾಗಿ ಸಬಲರಾಗಿ,
ಸಂಸಾರ ಮಾಡಿ!
ಮನೆಯ ಕೆಲಸ ಎಲ್ಲ ಮುಗಸಿಕೊಳ್ಳಿ!

ಆಮೆಲೆ,
ನಾವ್ ಆಟ ಆಡೋಣ!

ಈ ದರಿದ್ರ System ನ ಬುಡಸಮೇತ ಕಿತ್ತು ಕೃಷ್ಣ - ಕಾವೇರಿಗೆ ತೂರಿಬಿಡೋಣ. ಹೋಗಿ ಬಂಗಾಳ ಕೊಲ್ಲಿಲಿ ಮುಳುಗ್ಲಿ!

ಕರ್ನಾಟಕ, ಮತ್ತು ಕನ್ನಡಿಗರಿಗೆ ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ, ಅದು ಪೋಲಾಗಬಾರದು!

Now Focus on ವರ್ತಮಾನ!

&

Remember the Year 2035!
-
ಪ್ರವೀಣ ಮ ಮಗದುಮ್ಮ
ವಿದ್ಯಾರ್ಥಿಗಳೇ,
ಬೆಳಗಾವಿ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವುದರಿಂದ,
ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
ಕಾರ್ಯಕ್ರಮ ಮುಗಿದ ತಕ್ಷಣ ಎಲ್ಲರಿಗೂ ಪ್ರತಿಕ್ರಿಯೆ ನೀಡಲಾಗುವುದು.
-
Panchajanya IAS
Panchajanya IAS (Official)
Elimination Techniques : https://youtu.be/xmPMkLLZD-4?si=jCctoRgHrzlTf6u7
Learn all elimination Tricks here

LIET & SCOPE BATCH is available at just 149 Rs (2500)

Offer valid for next few minutes 🤗

Enroll Now 👇
• Android Link :
https://play.google.com/store/apps/details?id=co.lenord.owsqi

• iOS Link :
https://apps.apple.com/in/app/delhi-secrets/id6476488415

#UPSC CSE Result Day Offer
Forwarded from AKSARA Official
ಕೆಎಎಸ್ ಪೂರ್ವಭಾವಿ ಪರೀಕ್ಷೆ ಕುರಿತು ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರನ್ನೂ ಒಳಗೊಂಡ ನಿಮ್ಮ ಹೋರಾಟಕ್ಕೆ ಸಂಪೂರ್ಣವಾಗಿ
Anonymous Poll
86%
ನನ್ನ ಬೆಂಬಲವಿದೆ ಮುಂದಿನ ಹೋರಾಟದಲ್ಲಿ ನಿಮ್ಮ ಜೊತೆ ನಾನು ನಿಲ್ಲುತ್ತೇನೆ
14%
ನನ್ನ ಬೆಂಬಲವಿಲ್ಲ ನಾನು ಭಾಗವಹಿಸುವುದಿಲ್ಲ
9 ಗಂಟೆಗೆ ಒಂದು Special Video
ನಿರೀಕ್ಷಿಸಿ! 🌳