Karnataka Congress
250 subscribers
45 photos
9 videos
16 links
Download Telegram
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ನಾಡಪ್ರಭು ಕೆಂಪೇಗೌಡರ ಸ್ಮರಣೆ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ನಾಮಕರಣ ಮಾಡುವ ಮೂಲಕ ಬೆಂಗಳೂರು ನಿರ್ಮಾತೃವಿಗೆ ಗೌರವ ಸಲ್ಲಿಕೆ.

#ಕೆಂಪೇಗೌಡಜಯಂತಿ #KempegowdaJayanthi
ರಾಜ್ಯದಲ್ಲಿ ಪ್ರಚೋದನಕಾರಿ ಭಾಷಣ ಮತ್ತು ಅದರಿಂದಾಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಕಠಿಣ ಕಾನೂನು ಜಾರಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಮಸೂದೆ - 2025, ದ್ವೇಷ ಭಾಷಣ ಮತ್ತು ದ್ವೇಷಪೂರಿತ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಮತ್ತು ನಿಯಂತ್ರಿಸುವ ಮಸೂದೆಯಾಗಿ ಜಾರಿಗೆ ಬರಲಿದೆ.

ವ್ಯಕ್ತಿಗಳು, ಗುಂಪುಗಳು ಮತ್ತು ಸಮಾಜದ ಮೇಲಿನ ನಕಾರಾತ್ಮಕ ಪರಿಣಾಮ ತಡೆಯುವುದು ಹಾಗೂ ರಾಜ್ಯದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಉದ್ದೇಶ ಈ ಮಸೂದೆಯದ್ದಾಗಿದೆ.
ರಾಜ್ಯವನ್ನು 'ಸರ್ವ ಜನಾಂಗದ ಶಾಂತಿಯ ತೋಟ'ವಾಗಿಸುವುದು ಕಾಂಗ್ರೆಸ್ ಸರ್ಕಾರದ ಧ್ಯೇಯ.
ರಾಜ್ಯ ಕಾಂಗ್ರೆಸ್ ಸರ್ಕಾರ ಕಲಾವಿದರ ಬಹು ವರ್ಷಗಳ ಬೇಡಿಕೆ ಈಡೇರಿಸಿದ್ದು ಹಿರಿಯ ಕಲಾವಿದರ ಮಾಸಾಶನವನ್ನು ರೂ. 2,500ಕ್ಕೆ ಹೆಚ್ಚಿಸಿ ಅನುದಾನ ಬಿಡುಗಡೆ ಮಾಡಿದೆ.

ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು ಹೆಚ್ಚಿಸಿ, ಮಾಸಾಶನಕ್ಕೆ ಬೇಕಾಗುವ ಒಟ್ಟು ಮೊತ್ತ ರೂ. 32.94 ಕೋಟಿ ಬಿಡುಗಡೆ ಮಾಡಲಾಗಿದೆ.
ಕಳಪೆ ಗುಣಮಟ್ಟದ 15 ಔಷಧ / ಕಾಂತಿವರ್ಧಕ ಉತ್ಪನ್ನಗಳಿಗೆ ಕರ್ನಾಟಕ ರಾಜ್ಯದಲ್ಲಿ ನಿರ್ಬಂಧ!
ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ.
ಜನರ ಆರೋಗ್ಯ ರಕ್ಷಣೆ, ಸುರಕ್ಷತೆ ಕಾಂಗ್ರೆಸ್ ಸರ್ಕಾರದ ಆದ್ಯತೆ.
ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯಿಂದ ಆರ್‌ಎಸ್‌ಎಸ್ ಮುಖವಾಡ ಮತ್ತೊಮ್ಮೆ ಕಳಚಿದೆ.

ಸಂವಿಧಾನದ ಬದಲು ಮನುಸ್ಮೃತಿ ಜಾರಿಗೊಳ್ಳಬೇಕು ಎಂಬುದೇ ಅದರ ಬಯಕೆಯಾಗಿದೆ. ಆದರೆ ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ.

ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯನೂ ತನ್ನ ಕೊನೆಯ ಉಸಿರಿನವರೆಗೂ ಸಂವಿಧಾನ ರಕ್ಷಣೆಗೆ ಹೋರಾಡುತ್ತಾನೆ.
- ರಾಹುಲ್ ಗಾಂಧಿ
South India’s linguistic diversity is a vibrant tapestry, weaving together languages like Kannada, Kodava, Tulu, Konkani, Tamil, Telugu, Malayalam, and many others. However, mandating Hindi as a third language in schools, especially in non-Hindi-speaking states like Karnataka, creates discord.

For speakers of Kannada, Tulu, or Kodava who are fluent in Kannada and English, struggling with written Hindi is a significant challenge—a sentiment shared by many students in linguistically rich regions. This issue transcends a single language; it’s about fairness and embracing our diversity.

Voices like D.K Suresh highlight the marginalization of South India, instead of fostering dialogue, some BJP leaders to appease central leaders, brand him “anti-national.” This stifles a crucial conversation: India’s strength lies in its mosaic of cultures and languages, not in a one-size-fits-all language policy. Forcing Hindi can hinder students who excel in other areas, dimming their potential.

We need dynamic, inclusive language policies that honour local identities, empowering students to master regional languages like Kannada or Tamil while offering Hindi as an option, not a mandate. Let’s build an education system that amplifies every voice, celebrating India’s diversity as its greatest asset.
@RahulGandhi @siddaramaiah @DKShivakumar @rssurjewala
ದೇಶಕ್ಕೆ ಕಾಂಗ್ರೆಸ್ ಕೊಡುಗೆ

ಭಾರತವು ತನ್ನ ಮೊದಲ ಅಣ್ವಸ್ತ್ರ ಪ್ರಯೋಗವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ 1974ರಲ್ಲಿ ಪೋಕ್ರಾನ್‌ನಲ್ಲಿ ಯಶಸ್ವಿಯಾಗಿ ನಡೆಸಿತು.

#ನಿಮಗಿದು_ತಿಳಿದಿರಲಿ
ಸಹನೆ ಕಳೆದುಕೊಳ್ಳುವುದೆಂದರೆ ಯುದ್ಧವನ್ನು ಸೋತಂತೆಯೇ.
- ಮಹಾತ್ಮ ಗಾಂಧಿ
ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ಗ್ಯಾಸ್ ಸಿಲಿಂಡರ್ ಸೇರಿದಂತೆ ದಿನಬಳಕೆಯ ವಸ್ತುಗಳಿಗೆ ಕೆಲವೇ ದಿನಗಳಲ್ಲಿ 'ಝಡ್ ಪ್ಲಸ್' ಸೆಕ್ಯೂರಿಟಿ ನೀಡಬೇಕಾದ ಪರಿಸ್ಥಿತಿ ಎದುರಾಗಲಿದೆ!
- @rssurjewala
ಸಾರ್ವಜನಿಕರ ಸುರಕ್ಷತೆಗಾಗಿ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಅಪರಾಧ ತಡೆ ಹಾಗೂ ಶಾಂತಿ ಮತ್ತು ಭದ್ರತೆಯ ಸ್ಥಿರತೆಯನ್ನು ಕಾಪಾಡುವಲ್ಲಿ ಈ ಕ್ರಮ ಪ್ರಮುಖ ಪಾತ್ರ ವಹಿಸಲಿದೆ.

ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟುವುದು. ಜನರಲ್ಲಿ ನಂಬಿಕೆ ಬೆಳೆಸುವುದು - ಸಮುದಾಯ ಪೊಲೀಸ್ ವ್ಯವಸ್ಥೆಯು ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧವನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.

ಯುವ ಜನರನ್ನು ಸಕಾರಾತ್ಮಕ ಚಟುವಟಿಗಳತ್ತ ತೊಡಗಿಸಲು ಇದು ಸಹಕಾರಿಯಾಗಿದ್ದು, ಒಟ್ಟಾರೆ ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗಳೊಂದಿಗೆ ಸನ್ನದ್ದರಾಗಿರಲು ಇದರಿಂದ ಸಾಧ್ಯವಾಗಲಿದೆ.
This media is not supported in your browser
VIEW IN TELEGRAM
ಸುಳ್ಳೇ ಇವರ ಮನೆ ದೇವ್ರು!

'ರಾಜಕೀಯ ನಾಯಕತ್ವದ ನಿರ್ಬಂಧ'ಗಳ ಕಾರಣಕ್ಕೆ ಭಾರತೀಯ ವಾಯುಪಡೆ (IAF) ಪಾಕಿಸ್ತಾನ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಯುದ್ಧವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು.

'ಪಾಕಿಸ್ತಾನದ ರಕ್ಷಣಾ ಸಂಸ್ಥೆಗಳು ಅಥವಾ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಬಾರದು' ಎಂಬ ಸ್ಪಷ್ಟ ಸೂಚನೆ ನೀಡಿದ್ದ ಕೇಂದ್ರ ಸರ್ಕಾರ.
#BJPFailsIndia
ದೇಶಕ್ಕೆ ಕಾಂಗ್ರೆಸ್ ಕೊಡುಗೆ

ದೇಶದ ಸಮಸ್ತ ನಾಗರೀಕರಿಗೆ ಗುಣಮಟ್ಟದ ಜೀವನವನ್ನು ಕಲ್ಪಿಸಲು 1975 ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು '20 ಅಂಶಗಳ ಕಾರ್ಯಕ್ರಮ'ವನ್ನು ರೂಪಿಸಿ ಜಾರಿಗೊಳಿಸಿದರು.

#ನಿಮಗಿದು_ತಿಳಿದಿರಲಿ
ಅವರು ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಬಳಿಕ ನಿಮ್ಮೊಂದಿಗೆ ಸಂಘರ್ಷಕ್ಕಿಳಿಯುತ್ತಾರೆ, ಆಗ ನೀವು ಗೆದ್ದಂತೆ.
- ಮಹಾತ್ಮ ಗಾಂಧಿ
ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ನಿರಂತರ ಅನ್ಯಾಯ!
#ಮೋದಿಮೋಸ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ರಾಜ್ಯದಲ್ಲಿ ಹೊಸದಾಗಿ 6,599 'ಗ್ರಾಮ ಗ್ರಂಥಾಲಯ'ಗಳನ್ನು ತೆರೆಯಲು ಮುಂದಾಗಿದ್ದು, 31 ಜಿಲ್ಲೆಗಳಲ್ಲಿ 'ಗ್ರಾಮ ಗ್ರಂಥಾಲಯ'ಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಪ್ರತಿ ಗ್ರಂಥಾಲಯಕ್ಕೆ ತಲಾ ₹2 ಲಕ್ಷ ಮೊತ್ತದ ಪುಸ್ತಕಗಳನ್ನು 'ನ್ಯಾಷನಲ್‌ ಬುಕ್‌ ಟ್ರಸ್ಟ್‌ ಇಂಡಿಯಾ'ದಿಂದ ಖರೀದಿಸಲಾಗಿದ್ದು, ಆಯಾ ಜಿಲ್ಲಾ ಪಂಚಾಯಿತಿಗಳಿಗೆ ಪುಸ್ತಕಗಳು ಸರಬರಾಜಾಗಿವೆ.

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು, ಡಿಜಿಟಲ್ ಕೌಶಲ ಮತ್ತು ವೈಜ್ಞಾನಿಕ ಮನೋಧರ್ಮ ಬೆಳೆಸುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಗುರಿ.
#ಗ್ರಾಮಗ್ರಂಥಾಲಯ
ಕಾಂಗ್ರೆಸ್ ಸರ್ಕಾರ ಕೃಷಿ ಕ್ಷೇತ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡುತ್ತಿದ್ದು ಇದೀಗ‌ ಬೆಳೆ ಸಮೀಕ್ಷೆಗೆ ವಿನೂತನ ತಂತ್ರಜ್ಞಾನ ಪರಿಚಯಿಸಿದೆ.

ಮುಂಗಾರು ಬೆಳೆ ಸಮೀಕ್ಷೆಗೆ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗಿದ್ದು ರೈತ ಬೆಳೆದಿರುವ ಬೆಳೆಗಳ ವಿವರವನ್ನು ಮೊಬೈಲ್ ತಂತ್ರಾಂಶದ ಮೂಲಕವೇ ಕ್ಷಣಮಾತ್ರದಲ್ಲಿ ವೀಕ್ಷಣೆ ಮಾಡಬಹುದಾಗಿದೆ. ನಿಖರತೆಗಾಗಿ ಸ್ವತಃ ರೈತರಿಂದಲೇ ಸಮೀಕ್ಷೆ ನಡೆಸಲಾಗುತ್ತದೆ.

ವಿವಿಧ ಸವಲತ್ತು, ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿದ್ದು ಆಧುನಿಕ ತಂತ್ರಜ್ಞಾನದ ಮೂಲಕ ಈ ಪ್ರಕ್ರಿಯೆಯನ್ನು ನಿಖರ ಹಾಗೂ ಸರಳಗೊಳಿಸಿದೆ ರೈತಸ್ನೇಹಿ ಕಾಂಗ್ರೆಸ್ ಸರ್ಕಾರ.
#ರೈತಸ್ನೇಹಿಕಾಂಗ್ರೆಸ್‌ಸರ್ಕಾರ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಬೆಂಗಳೂರು ಮಹಾನಗರ ನವೋದ್ಯಮಗಳ ಹೂಡಿಕೆಯಲ್ಲಿ ಇಡೀ ದೇಶದಲ್ಲಿಯೇ ಅಗ್ರಸ್ಥಾನ ಪಡೆದುಕೊಂಡಿದೆ.

ಸ್ಟಾರ್ಟ್ ಅಪ್ ನಿಧಿ ವರದಿ ಪ್ರಕಾರ, ದೆಹಲಿ, ಮುಂಬೈ ನಗರಗಳನ್ನು ಹಿಂದಿಕ್ಕಿರುವ ಬೆಂಗಳೂರು ಭಾರತದಲ್ಲಿ ಸ್ಟಾರ್ಟ್‌ ಅಪ್ ನಿಧಿ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ.

ಒಟ್ಟು 143 ಒಪ್ಪಂದಗಳಲ್ಲಿ 3.9 ಶತಕೋಟಿ ಡಾಲರ್‌ಗಳ ಬೃಹತ್ ಮೊತ್ತವನ್ನು ಸಿಲಿಕಾನ್ ಸಿಟಿ ಆಕರ್ಷಿಸಿದೆ. ಇದು ದೇಶ ಒಟ್ಟಾರೆ ಸ್ವೀಕರಿಸುವ ಬಂಡವಾಳದ ಶೇ.40ರಷ್ಟಾಗಿದೆ!
#ಪ್ರಗತಿ_ಕಾಂಗ್ರೆಸ್_ಗ್ಯಾರಂಟಿ
ಪಹಲ್ಗಾಮ್ ದಾಳಿಯ ಬಳಿಕ ಮೋದಿ ಸರ್ಕಾರ ಎರಡು ಬಾರಿ ಸರ್ವಪಕ್ಷ ಸಭೆ ಕರೆದಿತ್ತು, ಆದರೆ ಸ್ವತಃ ಮೋದಿಯವರೇ ಎರಡು ಬಾರಿಯೂ ಸಭೆಗೆ ಹಾಜರಾಗಲಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ವಿಷಯ, ಇದು ದೇಶದ ಜನರಿಗೆ ಮಾಡಿದ ಅವಮಾನ.
- @kharge
ಪ್ರಧಾನಿ ಮೋದಿಯವರು ತಮ್ಮ ಭಾಷಣಗಳಲ್ಲಿ "ಮೋದಿ ಇರುವವರೆಗೆ ಎಲ್ಲವೂ ಸುರಕ್ಷಿತ" ಎಂದು ಹೇಳುತ್ತಾರೆ.

ಆದರೆ ವಾಸ್ತವದಲ್ಲಿ ಹಾಗೆ ನಡದೇ ಇಲ್ಲ.

ಬಡವರು ತೊಂದರೆಗೆ ಸಿಲುಕಿದಾಗ - ಮೋದಿ ಕಾಣೆಯಾಗಿದ್ದಾರೆ.
ಹಣದುಬ್ಬರ ಹೆಚ್ಚುತ್ತಿದೆ - ಮೋದಿ ಕಾಣೆಯಾಗಿದ್ದಾರೆ.
ಮಣಿಪುರ ಉರಿಯುತ್ತಿದೆ - ಮೋದಿ ಕಾಣೆಯಾಗಿದ್ದಾರೆ.
ನಿರುದ್ಯೋಗ ಹೆಚ್ಚುತ್ತಿದೆ - ಮೋದಿ ಕಾಣೆಯಾಗಿದ್ದಾರೆ.

ಸಮಸ್ಯೆಯನ್ನು ಪರಿಹರಿಸುವ ಬದಲು ಅದನ್ನು ನೋಡಿ ಓಡಿಹೋಗುವವರನ್ನು ನಾವು ಪ್ರಶ್ನಿಸಬೇಕು.
- @kharge
#BJPFailsIndia