SPARDHA 🎆 DEEPTI
645 subscribers
524 photos
6 videos
81 files
22 links
# A.V.Hiremath
#Specialy History Educator
#ಸ್ಪರ್ಧಾ ಸಮಗ್ರ ಇತಿಹಾಸ (ಪುಸ್ತಕದ ಲೇಖಕರು)
# 8088033417
# Vijaya nagar, Bangalore
#ಉದ್ದೇಶ: ಸ್ಪರ್ಧಾತ್ಮಕ ಜ್ಞಾನ ಮತ್ತು ನೇಮಕಾತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಉಚಿತವಾಗಿ ಹಂಚುವುದು.
Download Telegram
Biopharma SHAKTI Scheme (ಬಯೋಫಾರ್ಮಾ ಶಕ್ತಿ ಯೋಜನೆ)

ಭಾರತದಲ್ಲಿ ಜೈವಿಕ ಔಷಧಗಳ (Biologics) ಮತ್ತು ಜೈವಿಕ ಸಮಾನ ಔಷಧಗಳ (Biosimilars) ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಕೇಂದ್ರ ಸರ್ಕಾರ 'ಬಯೋಫಾರ್ಮಾ ಶಕ್ತಿ ಯೋಜನೆ'ಯನ್ನು ಘೋಷಿಸಿದೆ.

ಸಂಬಂಧಿಸಿದ ಸಚಿವಾಲಯ:
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
❗️'ನುಮಾಹಾಂಗ್ಮಾ' (Numahangma)

ಚಿತ್ರದ ಹೆಸರು:
Numahangma (ನುಮಾಹಾಂಗ್ಮಾ) ಇದು ಭಾರತದ ಸಿಕ್ಕಿಂ (Sikkim) ರಾಜ್ಯದ ವಿಶಿಷ್ಟ ಕಥಾಹಂದರ ಹೊಂದಿರುವ ಪ್ರಮುಖ ಫೀಚರ್ ಫಿಲ್ಮ್ ಆಗಿದೆ.

ಪ್ರತಿಷ್ಠಿತ ಆಯ್ಕೆ:
ಈ ಚಿತ್ರವು ನೇಪಾಳದಲ್ಲಿ ನಡೆಯಲಿರುವ 2ನೇ ನೇಪಾಳ ಸ್ಥಳೀಯ ಚಲನಚಿತ್ರೋತ್ಸವ 2026 (2nd Nepal Indigenous Film Festival 2026) ಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.

ವಿಶೇಷ ಸ್ಥಾನಮಾನ:
ಸಿಕ್ಕಿಂ ಭಾರತದ ಮೊದಲ ಸಂಪೂರ್ಣ ಸಾವಯವ ರಾಜ್ಯ (100% Organic State) ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಸ್ಥಳೀಯ ಬುಡಕಟ್ಟುಗಳು:
ಲೆಪ್ಚಾ (Lepcha), ಭುಟಿಯಾ (Bhutia) ಮತ್ತು ಲಿಂಬು (Limbu) ಇಲ್ಲಿನ ಪ್ರಮುಖ ಸ್ಥಳೀಯ ಸಮುದಾಯಗಳಾಗಿದ್ದು, ಸಿನಿಮಾ ಇಂತಹ ಸಮುದಾಯಗಳ ಹಿನ್ನೆಲೆಯನ್ನು ಹೊಂದಿರುತ್ತದೆ
ಪ್ರತಿ ಹನಿಗೆ ಹೆಚ್ಚು ಬೆಳೆ (Per Drop More Crop–PDMC)
‘ಪ್ರತಿ ಹನಿಗೆ ಹೆಚ್ಚು ಬೆಳೆ’ ಯೋಜನೆಯನ್ನು 2015–16ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)ಯ ಒಂದು ಘಟಕವಾಗಿ ಪ್ರಾರಂಭಿಸಲಾಯಿತು. ಪ್ರಸ್ತುತ ಇದನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
- ಮುಖ್ಯ ಉದ್ದೇಶ: ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸಿ, ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿ ಪಡೆಯುವುದು.
- ನೀರಾವರಿ ಪದ್ಧತಿಗಳು: ಹನಿ ನೀರಾವರಿ ಮತ್ತು ತುಂತುರು ನೀರಾವರಿ.
- ಪ್ರಯೋಜನ: ನೀರಿನ ಪೋಲು ಕಡಿಮೆಯಾಗುತ್ತದೆ; ನೀರು, ಗೊಬ್ಬರ ಮತ್ತು ಕಾರ್ಮಿಕ ವೆಚ್ಚ ಉಳಿತಾಯವಾಗುತ್ತದೆ.
- ಹಣಕಾಸಿನ ನೆರವು: ಸೂಕ್ಷ್ಮ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲು ಅರ್ಹ ರೈತರಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ.
- ಘೋಷವಾಕ್ಯ: ಪ್ರತಿ ಹನಿಗೆ ಹೆಚ್ಚು ಬೆಳೆ
ಎಲ್ಲರಿಗೂ ಈ ಮಾಹಿತಿ ಶೇರ್ ಮಾಡಿ
ಸ್ಪರ್ಧಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ.

ಇದು ಸರ್ಕಾರದಿಂದ ಕಾಲೇಜು ಶಿಕ್ಷಣ ಇಲಾಖೆ ಇಂದ 90 ಸಾವಿರ ಸ್ಪರ್ಧಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಇದರ ಅನುಕೂಲ ಪಡೆದುಕೊಳ್ಳಿ.
This media is not supported in your browser
VIEW IN TELEGRAM
🌾 ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ – 2026
ಏಕೆ ಸುದ್ದಿಯಲ್ಲಿ?

ಕರ್ನಾಟಕ ಸರ್ಕಾರವು ಸಣ್ಣ ಮತ್ತು ಬಡ ರೈತರಿಗೆ ಉಚಿತ ಯಾಂತ್ರೀಕೃತ ಬೇಸಾಯ ಹಾಗೂ ಭೂಮಿ ಉಳುಮೆ ಸೌಲಭ್ಯ ಒದಗಿಸುವ ಉದ್ದೇಶದಿಂದ ‘ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ’ಯನ್ನು ಸೆಪ್ಟೆಂಬರ್ 2026ರಲ್ಲಿ ಘೋಷಿಸಿದೆ.

ಯೋಜನೆಯ ಹೆಸರು: ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ

ರಾಜ್ಯ: ಕರ್ನಾಟಕ

ಪ್ರಮುಖ ಉದ್ದೇಶ: 3 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಬಡ ಹಾಗೂ ಸಣ್ಣ ರೈತರಿಗೆ ಉಚಿತವಾಗಿ ಜಮೀನು ಉಳುಮೆ ಮಾಡಿಸಿಕೊಡುವುದು.

ಸೌಲಭ್ಯ: ಉಚಿತ ಯಾಂತ್ರೀಕೃತ ಬೇಸಾಯ/ಟ್ರ್ಯಾಕ್ಟರ್ ಮೂಲಕ ಉಳುಮೆ.

ವಿಧಾನ: ಸರ್ಕಾರವು ಟ್ರ್ಯಾಕ್ಟರ್‌ಗಳನ್ನು ಬಾಡಿಗೆಗೆ ಪಡೆದು ರೈತರ ಜಮೀನುಗಳಲ್ಲಿ ಉಳುಮೆ ಕಾರ್ಯ ನಡೆಸಲಿದೆ.

ಅನುಷ್ಠಾನ: ಮೊದಲ ಹಂತದಲ್ಲಿ 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು.

ಜವಾಬ್ದಾರಿ ಇಲಾಖೆ: ಕೃಷಿ ಇಲಾಖೆ.
ಅಂದಾಜು ಅನುದಾನ: ₹152.28 ಕೋಟಿ.

🎯 ನೆನಪಿಟ್ಟುಕೊಳ್ಳಿ

ನೇಗಿಲ ಯೋಗಿ → ಸಣ್ಣ ರೈತ → 3 ಎಕರೆಗಿಂತ ಕಡಿಮೆ → ಉಚಿತ ಉಳುಮೆ → 31 ತಾಲ್ಲೂಕು → ₹152.28 ಕೋಟಿ → ಕೃಷಿ ಇಲಾಖೆ
1
CAR / DAR (RPC & KK ) Revised Key Answer
Notice_of_adv_capf_2026_260910223321.pdf
4.9 MB
🚨NEW NOTIFICATION 2026 🚔🔥

📢 Delhi Police & CAPF ನಲ್ಲಿ ಸಾವಿರಾರು Sub-Inspector (SI) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ! 👆

🎓 Qualification: Any Degree

📚 Final Semester ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ!

📅 Application Date:
➡️ 10-09-2026 ರಿಂದ 30-09-2026 ರವರೆಗೆ

📍 ಕರ್ನಾಟಕ ಪರೀಕ್ಷಾ ಕೇಂದ್ರಗಳು:

ಬೆಂಗಳೂರು • ಹುಬ್ಬಳ್ಳಿ • ಬೆಳಗಾವಿ • ಮೈಸೂರು • ಕಲಬುರಗಿ • ಮಂಗಳೂರು • ಶಿವಮೊಗ್ಗ • ಉಡುಪಿ

📌 ಅರ್ಹತೆ | ವಯೋಮಿತಿ | ಆಯ್ಕೆ ಪ್ರಕ್ರಿಯೆ | ಪರೀಕ್ಷಾ ವಿಧಾನ | ಸಂಪೂರ್ಣ ವಿವರಗಳು PDFನಲ್ಲಿ 👆
2
ಸಿಂಧೂ ನಾಗರಿಕತೆಯ ಹರಪ್ಪ ತಾಣದಲ್ಲಿ ದೊರೆತ ಜಗತ್ಪ್ರಸಿದ್ಧವಾದ "ನೃತ್ಯಗಾರ್ತಿ"ಯ (Dancing Girl) ಪುಟ್ಟ ವಿಗ್ರಹವನ್ನು ಯಾವ ಲೋಹದಿಂದ ಮತ್ತು ಯಾವ ತಂತ್ರಜ್ಞಾನ ಬಳಸಿ ಮಾಡಲಾಗಿದೆ?
Anonymous Quiz
7%
​A) ತಾಮ್ರ - ಸುತ್ತಿಗೆಯಿಂದ ಬಡಿದು
86%
B) ಕಂಚು (Bronze) - ಮೇಣದ ಅಚ್ಚಿನ ವಿಧಾನ (Lost Wax Technique)
5%
C) ಕಬ್ಬಿನ - ಕುಲುಮೆ ವಿಧಾನ
2%
D) ಚಿನ್ನ - ಫಿಲಿಗ್ರಿ ವಿಧಾನ
1504 ರಲ್ಲಿ ಯಮುನಾ ನದಿಯ ದಡದಲ್ಲಿ "ಆಗ್ರಾ" (Agra) ನಗರವನ್ನು ನಿರ್ಮಿಸಿದ ಮತ್ತು ದೆಹಲಿಯಿಂದ ರಾಜಧಾನಿಯನ್ನು ಆಗ್ರಾಕ್ಕೆ ವರ್ಗಾಯಿಸಿದ ಮೊದಲ ಸುಲ್ತಾನ ಯಾರು?
Anonymous Quiz
12%
​A) ಅಕ್ಬರ್
45%
B) ಸಿಕಂದರ್ ಲೋಧಿ
24%
C) ಇಬ್ರಾಹಿಂ ಲೋಧಿ
19%
D) ಷಹಜಹಾನ್
1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ, ಜವಾಹರಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಅಂಗೀಕರಿಸಲಾದ ಐತಿಹಾಸಿಕ ನಿರ್ಣಯ ಯಾವುದು?
Anonymous Quiz
7%
​A) ಭಾರತ ಬಿಟ್ಟು ತೊಲಗಿ
75%
B) ಪೂರ್ಣ ಸ್ವರಾಜ್
14%
C) ಅಸಹಕಾರ ಚಳುವಳಿ
5%
D) ಹೋಮ್ ರೂಲ್ ಲೀಗ್
ಗಾಂಧೀಜಿಯವರ ತತ್ವಗಳಿಂದ ಪ್ರಭಾವಿತರಾಗಿ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ, ಖಾದಿ ಮತ್ತು ಮದ್ಯಪಾನ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿದ, "ಕರ್ನಾಟಕದ ಗಾಂಧಿ" ಎಂದು ಕರೆಯಲ್ಪಡುವವರು ಯಾರು?
Anonymous Quiz
72%
​A) ಹರ್ಡೇಕರ್ ಮಂಜಪ್ಪ
24%
B) ಗಂಗಾಧರ ರಾವ್ ದೇಶಪಾಂಡೆ
4%
C) ಆಲೂರು ವೆಂಕಟರಾಯರು
0%
D) ಆರ್.ಆರ್. ದಿವಾಕರ್
ಬಾಲ ಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 'ಕೇಸರಿ' ಮತ್ತು 'ಮರಾಠ' ಎಂಬ ಎರಡು ಪತ್ರಿಕೆಗಳನ್ನು ಆರಂಭಿಸಿದರು. ಈ ಪತ್ರಿಕೆಗಳು ಕ್ರಮವಾಗಿ ಯಾವ ಭಾಷೆಯಲ್ಲಿದ್ದವು? (ಇದು ಬಹಳಷ್ಟು ಜನರನ್ನು ಗೊಂದಲಕ್ಕೀಡು ಮಾಡುವ ಪ್ರಶ್ನೆ).
Anonymous Quiz
17%
​A) ಕೇಸರಿ (ಮರಾಠಿ) ಮತ್ತು ಮರಾಠ (ಮರಾಠಿ)
28%
B) ಕೇಸರಿ (ಹಿಂದಿ) ಮತ್ತು ಮರಾಠ (ಇಂಗ್ಲಿಷ್)
48%
C) ಕೇಸರಿ (ಮರಾಠಿ) ಮತ್ತು ಮರಾಠ (ಇಂಗ್ಲಿಷ್)
7%
D) ಕೇಸರಿ (ಇಂಗ್ಲಿಷ್) ಮತ್ತು ಮರಾಠ (ಹಿಂದಿ)
Armed Police Constable (CAR/DAR) (RPC) – Provisional Result Link – https://kearecruitment.karnataka.gov.in/resrecruitment/CDARRKRESULT.ASPX
Armed Police Constable (CAR/DAR) (KK) – Provisional Result Link – https://kearecruitment.karnataka.gov.in/resrecruitment/CDARKKRESULT.ASPX
10 SEPTEMBER 2026 | UPSC-KPSC KEA ಪರೀಕ್ಷಾ ಪ್ರಚಲಿತ ವಿದ್ಯಮಾನಗಳು.

1.ಕರ್ನಾಟಕ ಸರ್ಕಾರವು ಬಾಹ್ಯಾಕಾಶ ಮತ್ತು ವಿಮಾನೋದ್ಯಮ ನೀತಿ 2026–31ಕ್ಕೆ ಅನುಮೋದನೆ ನೀಡಿದ್ದು, ಮುಂದಿನ 5 ವರ್ಷಗಳಲ್ಲಿ ₹60,000 ಕೋಟಿ ಹೂಡಿಕೆ ಮತ್ತು 60,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.

2.ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ 2 ಚರಣಗಳ ಗಾಯನ ಕಡ್ಡಾಯಗೊಳಿಸಲಾಗಿದ್ದು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆಯನ್ನು ಹಾಡಲು ನಿರ್ದೇಶಿಸಲಾಗಿದೆ.

3.ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾ ಭೂದಾಖಲೆ ಆಧುನೀಕರಣ ಕಾರ್ಯಕ್ರಮ 3.0 ಅನ್ನು 2026–31 ಅವಧಿಗೆ ಆರಂಭಿಸಿದೆ.ಈ ಕಾರ್ಯಕ್ರಮಕ್ಕೆ ಸುಮಾರು ₹565.50 ಕೋಟಿ ವೆಚ್ಚ ನಿರೀಕ್ಷಿಸಲಾಗಿದ್ದು, ನಕ್ಷೆ, ಮಾಲೀಕತ್ವ, ನೋಂದಣಿ ಮತ್ತು ನ್ಯಾಯಾಲಯ ಪ್ರಕರಣಗಳ ಮಾಹಿತಿಯನ್ನು ಏಕೀಕರಿಸುವ ಭೂ ಮಾಹಿತಿ ವ್ಯವಸ್ಥೆ ರೂಪಿಸಲಾಗುತ್ತದೆ.
ಪ್ರತಿಯೊಂದು ಭೂಖಂಡಕ್ಕೂ 14 ಅಂಕಿಯ ವಿಶಿಷ್ಟ ಭೂಖಂಡ ಗುರುತು ಸಂಖ್ಯೆ — ‘ಭೂ-ಆಧಾರ್’ ನೀಡುವುದನ್ನು ದೇಶವ್ಯಾಪಿಯಾಗಿ ವಿಸ್ತರಿಸುವುದು ಇದರ ಪ್ರಮುಖ ಗುರಿಯಾಗಿದೆ.

4.ಇಸ್ರೋವು ಮಹೇಂದ್ರಗಿರಿಯ ಪ್ರೊಪಲ್ಷನ್ ಸಂಕೀರ್ಣದಲ್ಲಿ ಸಿ.ಇ.-20 ಕ್ರಯೋಜೆನಿಕ್ ಎಂಜಿನ್‌ನ ಹಾರಾಟ ಸ್ವೀಕೃತಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.ಈ ಎಂಜಿನ್ ಸುಮಾರು 22 ಟನ್ ಒತ್ತಡ ಸಾಮರ್ಥ್ಯದಲ್ಲಿ ಪರೀಕ್ಷಿಸಲ್ಪಟ್ಟಿದ್ದು, ಮುಂದಿನ ಎಲ್‌ವಿಎಂ-3 ಎಂ-7 ಕಾರ್ಯಾಚರಣಾ ಉಡಾವಣೆಯಲ್ಲಿ ಬಳಸಲಾಗುತ್ತದೆ.

5.ಮೊದಲ ಅಂತರರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆ 9–10 ಸೆಪ್ಟೆಂಬರ್ 2026ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಿತು.
ಸುಮಾರು 90 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಿದ ಈ ಶೃಂಗಸಭೆಯಲ್ಲಿ ಬಾಹ್ಯಾಕಾಶ ಆರ್ಥಿಕತೆ, ವೈಜ್ಞಾನಿಕ ಅನ್ವೇಷಣೆ, ಭದ್ರತೆ ಮತ್ತು ಸುಸ್ಥಿರ ಬಳಕೆಗೆ ಒತ್ತು ನೀಡಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿ ಸುರಕ್ಷಿತ, ಶಾಂತಿಯುತ ಮತ್ತು ಸುಸ್ಥಿರ ಬಾಹ್ಯಾಕಾಶ ಬಳಕೆಗೆ ಭಾರತ ಬದ್ಧವಾಗಿದೆ ಎಂದು ತಿಳಿಸಿದರು.

6.ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಮೈಸೂರು (INS Mysore) ಮಲೇಷ್ಯಾದ ಲುಮುಟ್‌ಗೆ ತಲುಪಿ, ಭಾರತ ಮತ್ತು ಮಲೇಷ್ಯಾ ನಡುವಿನ 'ಸಮುದ್ರ ಲಕ್ಷ್ಮಣ' (Samudra Lakshmana) ದ್ವಿಪಕ್ಷೀಯ ನೌಕಾ ಅಭ್ಯಾಸದ 4ನೇ ಆವೃತ್ತಿಯಲ್ಲಿ ಯಶಸ್ವಿಯಾಗಿ ಭಾಗವಹಿಸಿದೆ.

7.ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ಕಿಶೋರ್ ಮಕ್ವಾನಾ ಅವರಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜನಸೇವಾ ಪ್ರಶಸ್ತಿ 2026 ಪ್ರದಾನ ಮಾಡಲಾಗಿದೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರಿಗೆ ಕಳಿಂಗ ರತ್ನ ಪ್ರಶಸ್ತಿ 2026 ಪ್ರದಾನ ಮಾಡಲಾಗಿದೆ.

8.ಉತ್ತರ ಪ್ರದೇಶದ ಬಖಿರಾ ಸರೋವರದ ಸುಮಾರು 25,000 ವರ್ಷಗಳ ಹಳೆಯ ಕೆಸರು ನಿಕ್ಷೇಪಗಳ ಅಧ್ಯಯನದಿಂದ ಮಧ್ಯ ಗಂಗಾ ಬಯಲಿನ ಪ್ರಾಚೀನ ಹವಾಮಾನ ಮತ್ತು ಮಾನ್ಸೂನ್ ಬದಲಾವಣೆಗಳ ಕುರಿತು ಮಾಹಿತಿ ದೊರೆತಿದೆ.

9.ಲಡಾಖ್‌ಗೆ ವಿಶೇಷ ಸಾಂವಿಧಾನಿಕ ರಕ್ಷಣೆ ಒದಗಿಸುವ ಉದ್ದೇಶದಿಂದ ಸಂವಿಧಾನದ ಕಲಂ 371ರಡಿ ‘371(ಕೆ)’ ಮಾದರಿಯ ವಿಶೇಷ ಪ್ರಾವಧಾನ ಕುರಿತು ಕೇಂದ್ರ ಮಟ್ಟದಲ್ಲಿ ಪ್ರಸ್ತಾಪಿಸಲಾಗಿದೆ.ಇದು ಇನ್ನೂ ಜಾರಿಯಾದ ಸಂವಿಧಾನ ತಿದ್ದುಪಡಿ ಅಲ್ಲ, ಚರ್ಚೆಯ ಹಂತದಲ್ಲಿರುವ ಪ್ರಸ್ತಾಪವಾಗಿದೆ.

10.'ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ' ಯೋಜನೆ (ಸಿಎಂ ವಿದ್ಯಾರ್ಥಿ ಸಹಾಯ ಹಸ್ತ) ಎನ್ನುವುದು ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ನೆರವಾಗಲು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ದೆಹಲಿಯ ಮೆಹ್ರೌಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಪ್ರಸಿದ್ಧ "ಕಬ್ಬಿನದ ಸ್ತಂಭ" (Iron Pillar) ಇಂದಿಗೂ ತುಕ್ಕು ಹಿಡಿದಿಲ್ಲ. ಈ ಸ್ತಂಭದ ಶಾಸನದಲ್ಲಿ ಯಾವ ರಾಜನ ಉಲ್ಲೇಖವಿದೆ?
Anonymous Quiz
11%
​A) ಅಶೋಕ
55%
B) ಎರಡನೇ ಚಂದ್ರಗುಪ್ತ
31%
C) ಸಮುದ್ರಗುಪ್ತ
3%
D) ಹರ್ಷವರ್ಧನ
ಐಹೊಳೆಯನ್ನು "ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು" ಎಂದು ಕರೆಯಲಾಗುತ್ತದೆ. ಇಲ್ಲಿರುವ ಯಾವ ಪ್ರಸಿದ್ಧ ದೇವಾಲಯವು ಬೌದ್ಧರ ಚೈತ್ಯಾಲಯದ ಮಾದರಿಯಲ್ಲಿ ಅಥವಾ "ಗಜಪೃಷ್ಠಾಕಾರ"ದ (Elephant Back / Apsidal) ವಿನ್ಯಾಸದಲ್ಲಿದೆ?
Anonymous Quiz
25%
​A) ಲಾಡ್ ಖಾನ್ ದೇವಾಲಯ
25%
B) ದುರ್ಗಾ ದೇವಾಲಯ
48%
C) ಮೇಗುತಿ ಜೈನ ದೇವಾಲಯ
2%
D) ಹುಚ್ಚಿಮಲ್ಲಿಗುಡಿ
ಅಕ್ಬರ್ ನ ಕಂದಾಯ ಮಂತ್ರಿಯಾಗಿದ್ದ ರಾಜಾ ತೋದರಮಲ್ಲನು (Raja Todar Mal) ಜಾರಿಗೆ ತಂದ "ದಹಸಾಲ ಪದ್ಧತಿ" (Dahsala System) ಅಥವಾ 'ಜಬ್ದಿ ಪದ್ಧತಿ'ಯಲ್ಲಿ ಭೂಕಂದಾಯವನ್ನು ಹೇಗೆ ನಿಗದಿಪಡಿಸಲಾಗುತ್ತಿತ್ತು?
Anonymous Quiz
10%
​A) ಪ್ರತಿ ವರ್ಷದ ಇಳುವರಿಯ ಆಧಾರದ ಮೇಲೆ
69%
B) ಕಳೆದ 10 ವರ್ಷಗಳ ಸರಾಸರಿ ಇಳುವರಿ ಮತ್ತು ಬೆಲೆಯ ಆಧಾರದ ಮೇಲೆ
4%
C) ಜಮೀನ್ದಾರರು ಹೇಳಿದಷ್ಟು
17%
D) ಭೂಮಿಯ ವಿಸ್ತೀರ್ಣದ ಆಧಾರದ ಮೇಲೆ ಮಾತ್ರ