TARGET KAS GROUP PAVAN RAJPUT
35.3K subscribers
8.48K photos
349 videos
3.27K files
1.04K links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
This media is not supported in your browser
VIEW IN TELEGRAM
ಇವತ್ತು ಒಂದು ಸಂತೋಷದ ವಿಷಯ ಹಂಚಿಕೊಳ್ಳಬೇಕು ನಿಮ್ಮ ಜೊತೆ,ನಾನು ಈ ಹಿಂದೆ ಅನೇಕ ಸಹಾಯ ಮಾಡಿದ್ರು ಯಾವ ಸಹಾಯ ಮಾಡಿದ್ದರ ಮಾಹಿತಿ ಹಂಚಿಕೊಳ್ಳುತ್ತಾ ಇರಲಿಲ್ಲ,ಯಾಕೆ ಅಂದ್ರೆ ನೋಡು ಇವನು ಸ್ವಲ್ಪ ಸಹಾಯ್ ಮಾಡಿ ಎಷ್ಟು ಬಿಲ್ಡಪ್ ತಗೊತ್ತಾನೆ ಅಂತ, ಆದ್ರೆ ಈಗ ಮತ್ತೆ ಅನಿಸಿತು ಸಮಾಜದಲ್ಲಿ ಕೆಲವರು ಹೇಗೆ ಇದ್ದರು ಒಂದು ಎಲ್ಲದಕ್ಕೂ ಮಾತಾಡುತ್ತಾರೆ,ಈಗ ನಮ್ಮ ಸಹಾಯ ಮಾಡಿದ್ದು ಹಂಚಿಕೊಂಡರೆ ಇನ್ನೂ ಅನೇಕ ಜನ ಇದನ್ನು ನೋಡಿ ಅವರಿಗೆ ಸಾಧ್ಯ ಆದಮಟ್ಟಿಗೆ ಅವರು ಸಹಾಯ ಮಾಡಲು ಮುಂದೆ ಬರುತ್ತಾರೆ ಎನ್ನುವ ಉದ್ದೇಶ ಇಂದ ಇವತ್ತು ಇದು ಸಹಾಯ ಮಾಡಿದ ಮಾಹಿತಿ ಹಂಚಿಕೊಳ್ಳುತ್ತಾ ಇರೋದು,

ಈ ವಿಡಿಯೋ ಅಲ್ಲಿ ಇರುವ ಸಹೋದರಿ ಬೀದರ್ ಜಿಲ್ಲೆ ಅವರು,ಹೆಸರು ಭಾಗ್ಯಲಕ್ಷ್ಮಿ ವೆಂಕಟೇಶ ಕೊರವ ಅಂತ ಇನ್ನೂ 4ನೇ ತರಗತಿ ತಂದೆ ಆಟೋ ಡ್ರೈವರ್ ಮಗಳಿಗೆ ಡಾಕ್ಟರ್ ಆಗುವ ಆಶೆ,ಅವರ ಕುಟುಂಬದ ಜೊತೆ ಮಾತಾಡಿ ಆ ಸಹೋದರಿ ಜೊತೆ ಮಾತಾಡಿ ಅವರ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿ ನನ್ನಿಂದ ಆದ 5000 ಸಹಾಯ ಮಾಡಿದೆ,ಮುಂದೆ ಏನಾದ್ರೂ kas ಅಧಿಕಾರಿ ಆಗಬೇಕು ಅಂತ ಅನಿಸಿದರೆ kas ಗೆ ಮಾರ್ಗದರ್ಶನ ಮಾಡುವ ಭರವಸೆ ನೀಡಿದೆ, ಈ ವಿಧ್ಯಾರ್ಥಿನಿ ವಿಳಾಸ ತಿಳಿದುಕೊಳ್ಳುವುದಕ್ಕೆ ನಮ್ಮ ಟಿಮ್ ತುಂಬಾ ಕೆಲಸ ಮಾಡಿದೆ ಕೇವಲ ವಿಡಿಯೋ ಅಲ್ಲಿ ಇರುವ ಉತ್ತರ ಬೀದರ್ ಅನ್ನೋದು ನೋಡಿ ಆ ಸಹೋದರಿ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಂಡು ನನಗೆ ತಿಳಿಸಿ ಇವತ್ತು ಈ ಸಹಾಯ ಮಾಡುವ ಹಾಗೆ ಸಾಧ್ಯ ಆಯ್ತು,ನಿಮ್ಮ ಎಲ್ಲರಿಗೂ ಧನ್ಯವಾದ.
👇👇👇👇👇
👆👆👆👆👆👆
ಅವರ ಕುಟುಂಬದ ಜೊತೆ ಮಾತಾಡಿದ ಆಡಿಯೋ

ಒಟ್ಟಿನಲ್ಲಿ ಆ ಸಹೋದರಿಯ ವಿಳಾಸ ತಿಳಿಕೊಳ್ಳುವುದಕ್ಕೆ ತಮ್ಮ ಸಮಯ ಮೀಸಲು ಇಟ್ಟು,ನನಗೆ ಮಾಹಿತಿ ನೀಡಿದ ಎಲ್ಲರಿಗೂ ಹಾಗೆ ಎಲ್ಲಾ ನನ್ನ ಸರ್ಕಾರಿ ಹುದ್ದೆಯಲ್ಲಿ ಇರುವ ಸ್ನೇಹಿತರಿಗೆ ವಿಶೇಷವಾಗಿ ರಾಜೇಶ್ FDA ಅವರಿಗೆ ಧನ್ಯವಾದಗಳು.
ಆ ವಿಧ್ಯಾರ್ಥಿನಿ ಗೆ ನನ್ನಿಂದ ಆದ ಹಣಕಾಸು ಸಹಾಯ ಮಾಡಿದ್ದು,


ಇದು ಏನೋ ನಾನು ಇಷ್ಟು ಸಹಾಯ ಮಾಡಿದೀನಿ ಅಂತ ಹೇಳೋಕ್ಕೊಬೇಕು ಇದರಿಂದ ನಾನು ಇನ್ನೂ ಲಾಭ ಪಡ್ಕೋಬೇಕು ಅಂತ ಅಲ್ಲ,ಇಂತ ಸಹಾಯವನ್ನು ನಾನು ಎರಡು ವರ್ಷದಿಂದ ಮಾಡುತ್ತಾ ಇದ್ದೇನೆ ಆದ್ರೆ ಯಾವತ್ತೂ ನಾನು ಇಷ್ಟು ಸಹಾಯ ಮಾಡಿದೆ ಅಂತ ಯಾವತ್ತೂ ಹೇಳಿಕೊಂಡಿಲ್ಲ,ಆದ್ರೆ ಇವತ್ತು ಹೇಳಿಕೊಳ್ಳೋದಕ್ಕೆ ಪ್ರಮುಖ ಕಾರಣ ಇದನ್ನು ಗಮನಿಸಿ ಒಬ್ಬರು ಆದ್ರೂ ನನ್ನ ಜಾಬ್ ಅಲ್ಲಿ ಇರುವ ಸ್ಪರ್ಧಾರ್ಥಿ,ಹಣದ ಅನುಕೂಲ ಇರುವವರು ಕಷ್ಟದಲ್ಲಿ,ಬಡತನದಲ್ಲಿ ಓದುವವರಿಗೆ ತಮ್ಮಿಂದ ಆಗುವ ಸಹಾಯ ಮಾಡಲಿ ಎನ್ನುವ ಆಶೆ ಅಷ್ಟೇ, ಅದು ಒಂದೇ ಉದ್ಧೇಶ ಇದರಿಂದ ಏನು ನಾನು ಏನು ಲಾಭ ಪಡೆಯೋಕೇ ರಾಜಕಾರಿಣಿ ಅಲ್ಲ ಒಬ್ಬ ಬಿಜಿನೆಸ್ ಮ್ಯಾನ್ ಅಷ್ಟೇ,ಯಾಕೆ ಅಂದ್ರೆ ಕೆಲವರು ಎಲ್ಲದರಲ್ಲೂ ಒಂದು ಟೀಕೆ ಮಾಡುತ್ತಾರೆ ಅದಕ್ಕೆ ಇದಕ್ಕೂ ಕೂಡ ಕೆಲವರು ಟೀಕೆ ಮಾಡಿ ಹೀಯಾಳಿಸುವರು ಇರುತ್ತಾರೆ ಅವರ ಹಾಗೆ ಮುಂದುವರಿಯಲಿ ನಮಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ನಾವು ಹೀಗೆ ಇನ್ನೂ ಸಹಾಯ ಮಾಡುತ್ತಾ ಸಾಗೋಣ ಒಳ್ಳೆ ಕೆಲಸ ಮಾಡೋಣ.
ಮಾನ್ಯ ಮುಖ್ಯಮಂತ್ರಿ ಅವರೇ ಭಾಷಾಭಿಮಾನ ಅಂದ್ರೆ ಸ್ವಲ್ಪ ಪಕ್ಕದ ರಾಜ್ಯವನ್ನು ನೋಡಿ ಕಲೀರಿ,ಅವರು ಹೈಕೋರ್ಟ್ ನ ಪ್ರಧಾನ ಭಾಷೆಯಾಗಿ ತಮ್ಮ ಮಾತೃಭಾಷೆ ಇರಬೇಕು ಎನ್ನುವ ಬೇಡಿಕೆ ಇಡುವ ನಿರ್ಣಯ ಮಂಡನೆ ಮಾಡುತ್ತಾ ಇದ್ದಾರೆ,

ಆದರೆ ನೀವು ಗ್ರೂಪ್ C ಪರೀಕ್ಷೆಗಳ ಪಠ್ಯಕ್ರಮದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರೋದನ್ನು ತೆಗೆದುಹಾಕಿ,ನಮ್ಮ ಮಾತೃಭಾಷೆ ಆಡಳಿತ ಭಾಷೆ ಕನ್ನಡಕ್ಕೆ ಕಡಿಮೆ ಸ್ಥಾನ ನೀಡಿದ್ದೀರಿ,ಇದೇನಾ ನಿಮ್ಮ ಕನ್ನಡ ಅಭಿಮಾನ.

ನಿಮ್ಮ ಕನ್ನಡ ಭಾಷಾಭಿಮಾನ ಹೇಗೆ ಇದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ

ಕನ್ನಡ 35 ಅಂಕಗಳು
ಇಂಗ್ಲಿಷ್ 35 ಅಂಕಗಳು

ಅಂದ್ರೆ ನಿಮ್ಮ ಪ್ರಕಾರ ಯಾವದೂ ನಮ್ಮ ಮಾತೃಭಾಷೆ,ಕನ್ನಡದಷ್ಟೇ ಶ್ರೇಷ್ಠವೇ ಇಂಗ್ಲಿಷ್ ಭಾಷೆ

ಭಾಷೆಯ ಜ್ಞಾನ ಇರಲಿ ಅದು ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಮುಖ್ಯ ಆದ್ರೆ ಕನ್ನಡ ಸರಿಸಮಾನ ಬೇಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ,ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
ಆಯ್ಕೆಯಾದ ಎಲ್ಲರಿಗೂ congratulations


ಎಲ್ಲರಿಗೂ ಒಳ್ಳೇದು ಆಗಲಿ ಯಾರು saad ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆ ಆಗುತ್ತಿರಿ ಮುಂದಿನ kas ತಯಾರಿ ಸೀರಿಯಸ್ ಆಗಿ ಮುಂದುವರಿಯಲಿ,ಇನ್ನು ಈ ಬಾರಿ saad ಅಂತಿಮ ಆಯ್ಕೆಪಟ್ಟಿಯಲ್ಲಿ ಯಾರು ಆಯ್ಕೆ ಆಗಲ್ಲ ಅವರು ಮುಂದಿನ saad ಅಥವಾ kas ಒಂದು ಆಯ್ಕೆ ಮಾಡ್ಕೊಂಡು ಚೆನ್ನಾಗಿ ವರ್ಕ್ ಮಾಡಿ,ನಿಮ್ಮ ನಿಮ್ಮ ಸಾಮರ್ಥ್ಯ ಆಧಾರದ ಮೇಲೆ ಎರಡು ಪ್ರಯತ್ನ ಮಾಡಿ ಎಲ್ಲರಿಗೂ ಒಳ್ಳೇದು ಆಗಲಿ
ನಾನು ಇವತ್ತು ಈ ಸಹಾಯ ಮಾಡಿದ್ದರ ಕುರಿತು ಹೇಳಿಕೊಳ್ಳುವುದರ ಹಿಂದಿನ ಉದ್ದೇಶ ಏನು ಇತ್ತು ಅದು ಈಗ ಈಡೇರಿತು,ಅದಕ್ಕೆ ಒಂದು ಅರ್ಥ ಈಗ ಬಂತು,ತುಂಬಾ ಸಂತೋಷ ನಿಮ್ಮಿಂದ ಆದ ಸಹಾಯ ಮಾಡಿ ಒಳ್ಳೇದು ಆಗಲಿ ಎಲ್ಲರಿಗೂ.