TARGET KAS GROUP PAVAN RAJPUT
35.3K subscribers
8.46K photos
346 videos
3.27K files
1.04K links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಇದು ಒಂದೇ ನೇಮಕಾತಿ ಅಲ್ಲ,ಅವನು ಎಕ್ಸಾಮ್ ಕಂಟ್ರೋಲ್ ರ ಆಗಿ ಇದ್ದಾಗ ಎಷ್ಟು ಪರೀಕ್ಷೆಗಳು ಅಕ್ರಮ ಆಗಿದ್ದಾವೆ ಎಲ್ಲವೂ ತನಿಖೆ ಆಗಬೇಕು,ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಒಬ್ಬರಿಗೂ ಅನ್ಯಾಯ ಆಗಬಾರದು ಇದರಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಯಾವ ಸ್ಪರ್ಧಾರ್ಥಿಗಳ ತಪ್ಪಿಲ್ಲ ಇದಕ್ಕೆ ಸರ್ಕಾರ ಎಲ್ಲರಿಗೂ ನ್ಯಾಯ ಒದಗಿಸಬೇಕು.
TARGET KAS GROUP PAVAN RAJPUT
https://youtu.be/sDcDdSNFMgQ?si=-J0eT8DdwRfSN9-p
384 KAS ನೇಮಕಾತಿ ಅಕ್ರಮದಲ್ಲಿ ಕೂಡ ಇವರ ಇಬ್ಬರ ಪಾತ್ರ.
CBI ತನಿಖೆ ಆದ್ರೆ ಮಾತ್ರ ಇದೊಂದು ತಾರ್ಕಿಕ ಅಂತ್ಯ ಕಾಣುತ್ತದೆ,ಇಲ್ಲ ಅಂದ್ರೆ ಏನು ಆಗಲ್ಲ,ಪಶುವೈದ್ಯಕೀಯ ನೇಮಕಾತಿ ಹಗರಣಕ್ಕೆ ಒಂದಕ್ಕೆ ಸೀಮಿತ ಮಾಡಿ,ಉಳಿದೆಲ್ಲ ನೇಮಕಾತಿ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೀತಾ ಇದೆ,ಅದಕ್ಕೆ ಅವನನ್ನು ED ಕಸ್ಟಡಿಗೆ ಹೋಗದಂತೆ ಪ್ರೀ ಪ್ಲ್ಯಾನ್ ಮಾಡಿದ್ದಾರೆ ED ಕಸ್ಟಡಿಗೆ ಹೋದ್ರೆ ಬೇರೆ ನೇಮಕಾತಿ ಹಗರಣಗಳು ಎಲ್ಲವೂ ಹೊರಗೆ ಬರುತ್ತೆ,ಆಗ ತುಂಬಾ ದೊಡ್ಡ ದೊಡ್ಡ ವ್ಯಕ್ತಿಗಳ ತಲೆದಂಡ ಆಗುತ್ತದೆ ಅನ್ನುವ ಭಯ ಇದೆ ಅದಕ್ಕೆ ಈ ಎಲ್ಲಾ ಡ್ರಾಮಾ ಅಷ್ಟೇ.
ಆ ಅಯೋಗ್ಯ ಅಧಿಕಾರಿ ಕರ್ತವ್ಯ ನಿರ್ವಹಿಸುವ ಅವಧಿಯಲ್ಲಿ ಅದ ನೇಮಕಾತಿ ಅಧಿಸೂಚನೆಗಳು.
TARGET KAS GROUP PAVAN RAJPUT
Photo
ಎಲ್ಲವೂ ಟಾಪ್ ಕ್ಲಾಸ್ ಹುದ್ದೆಗಳು
ಇವನು ತಪ್ಪು ಒಪ್ಪಿಕೊಂಡಿದ್ದು ಎಷ್ಟು ಅಕ್ರಮ ನೇಮಕಾತಿಗಳಿಗೆ?

ಎಷ್ಟು ಹುದ್ದೆಗಳಿಗೆ,ಯಾವ ಇಲಾಖೆ ಹುದ್ದೆಗಳಿಗೆ ಅಕ್ರಮ ನೇಮಕಾತಿ ಮಾಡಿದ್ದಾನೆ?

ಸರ್ಕಾರ ಯಾಕೆ ಎಲ್ಲಾ ಮಾಹಿತಿ ನೀಡುತ್ತಿಲ್ಲ,ಯಾರ ಪ್ರಭಾವದಿಂದ ಉಳಿದ ಅಕ್ರಮ ನೇಮಕಾತಿಗಳ ಬಗ್ಗೆ ತನಿಖೆ ಆಗುತ್ತಿಲ್ಲ,

ತುಂಬಾ ದಿನಗಳ ಕಾಲ ಸತ್ಯ ಮುಚ್ಚಿಟ್ಟುಕೊಳ್ಳುವುದಕ್ಕೆ ಆಗಲ್ಲ, ನೀವು ಏನೇ ಕಳ್ಳಾಟ ಆಡಿದರು ಹೊರಗೆ ಬಂದೇ ಬರುತ್ತೆ.
AP notification
ಬಗ್ಗೆ ಮೆಸ್ಸೇಜ್ ಮಾಡ್ತಾ ಇದೀರಿ

ನೋಡ್ರಿ ಅದು ಇನ್ನೂ ಡ್ರಾಪ್ಟ್ ಕೂಡ ಪೈನಲ್ ಆಗಿಲ್ಲ,ಗೆಜೆಟ್ ಆಗಬೇಕು ಆಮೇಲೆ ಅಧಿಸೂಚನೆ ಬಗ್ಗೆ ಮಾಹಿತಿ,

ಅವರು ಮಾನ್ಯ ಉನ್ನತ ಶಿಕ್ಷಣ ಸಚಿವರು ತಮ್ಮ ಕೆಲಸ ಏನು ಇದೆ ಅದು ಎಲ್ಲಾ ಬಿಟ್ಟು ಬೇರೆ ಕೆಲಸದಲ್ಲಿ busy ಇದ್ದಾರೆ, ಏನೋ ಈ ಹಿಂದೆ ಇದ್ದ ಹಾಗೆ ಒಳ್ಳೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ನೋಡೋಣ ಏನು ಮಾಡುತ್ತಾರೆ.
ಪಶುವೈದ್ಯಕೀಯ ನೇಮಕಾತಿ ಹಗರಣ,ಸಮುದ್ರದೊಳಗಿನ ಒಂದು ಸಣ್ಣ ಮೀನು ಅಷ್ಟೇ,ದೊಡ್ಡ ದೊಡ್ಡ ತಿಮಿಂಗಿಲಗಳು ಹೋಲಿಕೆ ಆಗುವ ಹಗರಣಗಳು ಇನ್ನೂ ಹೊರಗೆ ಬರೋಕೆ ಬಿಡ್ತಾ ಇಲ್ಲ,ಉಳಿದೆಲ್ಲ ದೊಡ್ಡ ನೇಮಕಾತಿ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೀತಾ ಇದೆ,CBI ತನಿಖೆ ಆದ್ರೆ ಎಲ್ಲಾ ದೊಡ್ಡ ದೊಡ್ಡ ತಿಮಿಂಗಿಲಗಳು ಬಲೆಗೆ ಬೀಳುತ್ತವೆ,ಆದ್ರೆ ಸರಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ ಯಾಕೆ ಅಂದ್ರೆ ಪ್ರಭಾವಿಗಳ ತಲೆದಂಡ ಆಗುತ್ತದೆ ಎನ್ನುವ ಭಯ ಶುರುವಾಗಿದೆ.

ಇಷ್ಟೆಲ್ಲಾ ನೇಮಕಾತಿ ಹಗರಣಗಳನ್ನು ಮಾಡಿದ್ದಾರೆ ಅಲ್ವಾ, ಆ ಜಾಗದಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಸ್ಪರ್ಧಾರ್ಥಿಗಳು ಆಯ್ಕೆ ಆಗಬೇಕಿತ್ತು ಆದ್ರೆ ದುಡ್ಡು ಕೊಟ್ಟವರು ಆ ಹುದ್ದೆಗೆ ಆಯ್ಕೆ ಆಗಿದ್ದಾರೆ,ಇಲ್ಲೆ ಪ್ರಾಮಾಣಿಕವಾಗಿ ಆಯ್ಕೆ ಆಗಬೇಕಾದ ಸ್ಪರ್ಧಾರ್ಥಿಗಳು ಆಯ್ಕೆ ಆಗಿಲ್ಲ ಅವರಿಗೆ ಯಾರು ನ್ಯಾಯ ಕೊಡಿಸುತ್ತಾರೆ,

ಆತ್ಮೀಯ ಸ್ಪರ್ಧಾರ್ಥಿಗಳೇ ನೀವು ಇನ್ನೂ ಎಚ್ಚೆತ್ತುಕೊಳ್ಳಬೇಕು,ಕಷ್ಟಪಟ್ಟು ಓದಿ ಪಾಯಿಂಟ್ಸ್ ಅಲ್ಲಿ ಮಿಸ್ ಆಯ್ತು ಒಂದು ಮಾರ್ಕ್ಸ್ ಅಲ್ಲಿ ಮಿಸ್ ಆಯ್ತು ಅಂತ ಹೇಳ್ತಾವಿದ್ದೀರಿ ಅಲ್ವಾ,ನೀವು ಹೀಗೆ ಲಿಸ್ಟ್ ಇಂದ ಹೊರಗೆ ಬರೋಕೆ ಕಾರಣ ನಿಮಗೆ ಸಿಗಬೇಕಾದ ಹುದ್ದೆಯನ್ನು ಬೇರೆ ಅವರು ದುಡ್ಡು ಕೊಟ್ಟು ಪಡೆದುಕೊಂಡಿದ್ದಾರೆ ಅದಕ್ಕೆ ನಿಮಗೆ ಪ್ರಾಮಾಣಿಕವಾಗಿ ಸಿಗಬೇಕಾದ ಹುದ್ದೆಗಳು ನಿಮಗೆ ಸಿಕ್ಕಿಲ್ಲ,ಇಲ್ಲ ಅಂದ್ರೆ ಪ್ರಾಮಾಣಿಕವಾಗಿ ಆಯ್ಕೆ ಆಗಿದ್ದರೆ ಆ ಜಾಗದಲ್ಲಿ ನೀವು ಇರ್ತಾ ಇದ್ದೀರಿ.
ಇವರು ಕೇವಲ ಪತ್ರದಲ್ಲಿ ಮಾತ್ರ
ಒಂದು ದಿನಾನೂ ಕೂಡ ಸರ್ಕಾರಕ್ಕೆ ನಿರಂತರವಾಗಿ ಒತ್ತಡ ತರುವ ಕೆಲಸ ಮಾಡಿಲ್ಲ.

ಮಾನ್ಯರೇ ಮೊದಲು ನಿಮಗೆ ಕನ್ನಡದ ಬಗ್ಗೆ ವಿಶೇಷ ಆದ್ಯತೆ ಇದ್ದರೆ,ನಿರಂತವಾಗಿ ಒತ್ತಡ ಹಾಕುವ ಕೆಲಸ ಮಾಡಿ ನೀವು ಮನಸು ಮಾಡಿದ್ರೆ ಇದು ದೊಡ್ಡ ಕೆಲಸ ಅಲ್ಲವೇ ಅಲ್ಲ,

ಸ್ಪರ್ಧಾರ್ಥಿಗಳು ನಿಮಗೆ ಒತ್ತಡ ಹಾಕಿದ ತಕ್ಷಣ ಒಂದು ಪತ್ರ ಬರೆಯುತ್ತೀರಿ ಆಮೇಲೆ ಆ ವಿಷಯ ಮರೆತು ಬಿಡುತ್ತೀರಿ,

ನಿಮಗೆ ನಿಜವಾಗಲು ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗುವಂತೆ ಆಗಬೇಕು ಅಂತ ಇದ್ದರೆ,ಸರ್ಕಾರಕ್ಕೆ ಒತ್ತಡ ಹಾಕಿ ನೇರವಾಗಿ ಮಾನ್ಯ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿ,ಇಂಗ್ಲಿಷ್,ಕಂಪ್ಯೂಟರ್ ಬೇಡ ಅಂತ ಅಲ್ಲ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ ಅದು ನಮ್ಮ ಸ್ಪರ್ಧಾರ್ಥಿಗಳ ಒತ್ತಾಯ ಯಾಕೆ ಅಂದ್ರೆ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್,ಕಂಪ್ಯೂಟರ್ ಕೂಡ ಅವಶ್ಯಕ, ಆದ್ರೆ ನಮ್ಮ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಅದಕ್ಕೆ ಹೆಚ್ಚು ಅಂಕಗಳು ನಿಗದಿ ಆಗಬೇಕು,

ಸಂಪೂರ್ಣ ಗ್ರೂಪ್ C ಪಠ್ಯಕ್ರಮ 2021 ಗೆ ತಿದ್ದುಪಡಿ ನಿಯಮ ಆಗಬೇಕು ಅದಕ್ಕೆ ನೀವು ಒತ್ತಡ ಹಾಕಿ ಪತ್ರ ಬರೆದರೆ ಅದು ಡಸ್ಟ್ ಬಿನ್ ಸೇರುತ್ತೆ ಅಷ್ಟೇ.

ಸಾಮಾನ್ಯ ಕನ್ನಡ 60 ಅಥವಾ 50 ಅಂಕಗಳು

ಸಾಮಾನ್ಯ ಇಂಗ್ಲಿಷ್ 20/25 ಅಂಕಗಳು

ಕಂಪ್ಯೂಟರ್ 20/25 ಅಂಕಗಳು

ಈ ರೀತಿಯಾಗಿ 2021 ರ ನೇಮಕಾತಿ ನಿಯಮಕ್ಕೆ ತಿದ್ದುಪಡಿ ಆಗಬೇಕು ಆಗ ಯಾರಿಗೂ ಅನ್ಯಾಯ ಆಗಲ್ಲ,ಆಗ ನಮ್ಮ ನಾಡಲ್ಲಿ ಕನ್ನಡಕ್ಕೆ ಆದ್ಯತೆ
TARGET KAS GROUP PAVAN RAJPUT
Photo
ಇದನ್ನು ಸ್ಪರ್ಧಾರ್ಥಿಪರ ಸಂಘಟನೆಗಳು ಒಗ್ಗಟ್ಟು ಆಗಿ ಗಂಭೀರವಾಗಿ ಪರಿಗಣಿಸಬೇಕು,ಬೇರೆ ಎಲ್ಲ ರಾಜ್ಯಗಳಲ್ಲಿ ಅಲ್ಲಿನ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ಇದೆ ನಮ್ಮ ರಾಜ್ಯದಲ್ಲಿ ನಮ್ಮ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ಇಲ್ಲ,ಕೇವಲ ಕನ್ನಡ 60% ಅಂತ ಹೇಳಿ ನಿಮಯ ಜಾರಿ ಮಾಡಿದ್ರೆ ಮುಖ್ಯ ಅಲ್ಲಾ ಮಾನ್ಯ ಮುಖ್ಯಮಂತ್ರಿ ಅವರೇ ಅದನ್ನು ಸ್ಪರ್ಧಾತ್ಮಕ ಪರೀಕ್ಷೆ ಅಲ್ಲಿ ಜಾರಿಗೆ ತರುವ ಕೆಲಸ ಮಾಡಿ,ಆಗ ನಿಮ್ಮ ಕನ್ನಡ ಅಭಿಮಾನಕ್ಕೆ ಒಂದು ಅರ್ಥ ಬರುತ್ತೆ,ಅಷ್ಟಕ್ಕೂ ಈಗಿನ ಸರಕಾರಕ್ಕೆ ತಿದ್ದುಪಡಿ ಮಾಡೋಕೆ ದೊಡ್ಡ ಕೆಲಸ ಅಲ್ಲಾ 2/3 ದಿನದ ಕೆಲಸ ಅಷ್ಟೇ,ಹೇಗೆ 1978 ನೇಮಕಾತಿ ನಿಯಮಗಳು ತಗೆದು ಹಾಕಿ ನಮ್ಮ ಕನ್ನಡ ಭಾಷೆಯನ್ನು ಹೇಗೆ ಮುಲೆಗುಂಪು ಮಾಡಿದರು ಅದಕ್ಕೆ ತಿದ್ದುಪಡಿ ತಂದರು ಈಗ ಅದೇ ಆಸಕ್ತಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುವ ಕೆಲಸ ಆಗಲಿ.