Balsanskar Kannada
2.75K subscribers
1.24K photos
2 videos
1.24K links
ಈಗಿನ ಮಕ್ಕಳಿಗೆ ಜೀವನದ ನಿಜವಾದ ಉದ್ದೇಶವೇನೆಂದು ಗೊತ್ತಾಗುತ್ತಿಲ್ಲ. ಅದರಿಂದ ಮಕ್ಕಳಲ್ಲಿ ಸುಸಂಸ್ಕಾರಗಳಾಗಲು ಬಾಲಸಂಸ್ಕಾರ ಪ್ರಾರಂಭಿಸುತ್ತಿದ್ದೇವೆ.

Like us On Facebook : https://www.facebook.com/Balsanskar.Kannada

Follow us On Twitter : https://twitter.com/Balasanskara
Download Telegram
🌸 ಅನಂತ ಕಾನ್ಹೇರೆ
ಅವರ ಬಲಿದಾನ ದಿನ
🌸

ಅನಂತರಾವ್ ಇವರು ೧೮೯೧ ರಂದು ರತ್ನಾಗಿರಿ ಜಿಲ್ಲೆಯ ಆಯನಿ ಮೇಟೆಯಲ್ಲಿ ಜನಿಸಿದರು. ಆಂಗ್ಲ ಶಿಕ್ಷಣ ಪಡೆಯಲು ಔರಂಗಾಬಾದಿನಲ್ಲಿದ್ದ ಸೋದರಮಾವನಲ್ಲಿ ಹೋದರು. ೧೮ ನೇ ವಯಸ್ಸಿನಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡುವ ಹುತಾತ್ಮಾ ಅನಂತ ಕಾನ್ಹೇರೆಯವರಂತಹ ಅನೇಕರ ಬಲಿದಾನದಿಂದಲೇ ಇಂದು ನಾವು ಸ್ವತಂತ್ರರಾಗಿದ್ದೇವೆ.೧೯ ಎಪ್ರಿಲ್ ೧೯೧೦ ರಂದು ಹುತಾತ್ಮ ಅನಂತ ಲಕ್ಷ್ಮಣ ಕಾನ್ಹೇರೆಯವರು ತಮ್ಮ ಪ್ರಾಣಾಹುತಿ ನೀಡಿದರು.

ಪೂರ್ಣ ಲೇಖನ ಓದಲು👇:
https://www.hindujagruti.org/hinduism-for-kids-kannada/126.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ಅಹಂಕಾರ

ಒಮ್ಮೆ ಶಂಕರಾಚರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ಮುಂದೆ ನಡೆಯುತ್ತಾ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು. ಆಗ ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತ ‘ಆಚಾರ್ಯರೆ, ನಿಮ್ಮ ಜ್ಞಾನವು ಎಷ್ಟು ಅಗಾಧವಾಗಿದೆ ! ನಮ್ಮ ಮುಂದೆ ಪವಿತ್ರ ಅಲಕನಂದಾ ನದಿಯು ಹರಿಯುತ್ತಿದೆ. ನಿಮ್ಮ ಜ್ಞಾನವು ಈ ಅಲಕನಂದಾ ನದಿಯ ಪ್ರವಾಹಕ್ಕಿಂತಲೂ ಎಷ್ಟೊ ಪಟ್ಟು ದೊಡ್ಡದಾಗಿರುವ ಆ ಮಹಾಸಾಗರದಂತೆ ಭಾಸವಾಗುತ್ತದೆ‘.

ಪೂರ್ಣ ಕಥೆ  ಓದಿ👇 : https://www.hindujagruti.org/hinduism-for-kids-kannada/4.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ ಸಬ್ಸ್ಕ್ರೈಬ್ ಮಾಡಿ👇 :
t.me/Balasanskara
ಶ್ರದ್ಧೆಯ ಮಾನದಂಡ

ತುಂಬಾ ಹಿಂದೆ ಸಾಧು ಮಹಾರಾಜರೊಬ್ಬರಿದ್ದರು. ಅವರು ರಾಮಾಯಣದ ಕಥೆಯನ್ನು ಹೇಳುತ್ತಿದ್ದರು. ಅವರ ಕಥೆಯನ್ನು ಕೇಳಿದ ಜನರು ಆನಂದದಿಂದ ಪುಳಕಿತರಾಗುತ್ತಿದ್ದರು. ಆ ಸಾಧು ಮಹಾರಾಜರು ಒಂದು ನಿಯಮ ಪಾಲಿಸುತ್ತಿದ್ದರು, ಅದೇನೆಂದರೆ ಪ್ರತಿದಿನ ಅವರು ಕಥೆಯನ್ನು ಆರಂಭಿಸುವ ಮೊದಲು ಹನುಮಂತನನ್ನು ಕಥೆಯನ್ನು ಕೇಳಲು ಆಹ್ವಾನಿಸುತ್ತಿದ್ದರು.

ಪೂರ್ಣ ಲೇಖನ ಓದಿ👇 :
https://www.hindujagruti.org/hinduism-for-kids-kannada/7061.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ಆಳುಪ ರಾಜವಂಶ

ಆಳುಪರದು, ಕರ್ನಾಟಕದ ಬಹಳ ಹಳೆಯ ರಾಜವಂಶಗಳಲ್ಲಿ ಒಂದು. ಅವರು ಕರ್ನಾಟಕದ ಕರಾವಳಿ ಪ್ರದೇಶಗಳನ್ನು ಬಹು ಕಾಲ ಆಳಿದರು. ಈ ವಂಶದ ಇತಿಹಾಸವು, ಅದರ ರಾಜರುಗಳ ಬಗ್ಗೆ ಲಭ್ಯವಿರುವ ಮಾಹಿತಿಗಳು ಸೂಚಿಸುವುದಕ್ಕಿಂತ ಸಾಕಷ್ಟು ಹಿಂದೆ ಹೋಗುತ್ತದೆ. ಆಳುಪರು ಕ್ರಿ.ಪೂ. ಮೂರನೆಯ ಶತಮಾನದಷ್ಟು ಹಿಂದೆಯೇ ಮಂಗಳೂರಿನ ಬಳಿಯ ಕಡಲತೀರ ಪ್ರದೇಶಕ್ಕೆ ವಲಸೆ ಬಂದಿರುವುದು ಸಾಧ್ಯ. ಅವರು ದಕ್ಷಿಣದ ಕಾಸರಗೋಡಿನಿಂದ ಇಂದಿನ ಉಡುಪಿಯವರೆಗಿನ ನಾಡನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆಡಳಿತ ನಡೆಸಿದರು. ಮಂಗಳೂರು ಅವರ ಕೇಂದ್ರವಾಗಿತ್ತು. ಅವರ ಆಳ್ವಿಕೆಯು ಕ್ರಿಸ್ತಶಕದ ಮೊದಲ ಭಾಗದಿಂದ ಹಿಡಿದು, ಸುಮಾರು ಹದಿನೈದು ಶತಮಾನಗಳ ಕಾಲ ಎಡೆಬಿಡದೆ ಮುಂದುವರಿಯಿತು.

ಪೂರ್ಣ ಲೇಖನ ಓದಿ 👇: https://www.hindujagruti.org/hinduism-for-kids-kannada/129.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ನೈತಿಕತೆಯನ್ನು ಹೆಚ್ಚಿಸಿ, ಸದಾ ಸತ್ಯವನ್ನೇ ಹೇಳಿ !

ಬಾಲಮಿತ್ರರೇ, ನಿಮಗೆಲ್ಲರಿಗೂ ‘ಸದಾ ಸತ್ಯವನ್ನೇ ಹೇಳಬೇಕು’ ಎಂಬುದು ತಿಳಿದಿದೆ. ಆದರೆ ಮಕ್ಕಳು ತಪ್ಪುಗಳಾದಾಗ ಯಾರಾದರೂ ‘ಬೈದರೇ’ ಎಂಬ ಹೆದರಿಕೆಯಿಂದ ಸುಳ್ಳು ಹೇಳುತ್ತಾರೆ.ಸುಳ್ಳು ಹೇಳುವುದರ ದುಷ್ಪರಿಣಾಮಗಳು
ಸುಳ್ಳು ಹೇಳುವುದರಿಂದ ಪಾಪ ತಗಲುತ್ತದೆ. ತಪ್ಪನ್ನು ಅಡಗಿಸಲು ಸುಳ್ಳು ಹೇಳಿದಾಗ ವ್ಯಕ್ತಿಗೆ ೨ ಪಾಪಗಳ ದಂಡ ತೆರಬೇಕಾಗುತ್ತದೆ.

ಪೂರ್ಣ ಲೇಖನ ಓದಿ 👇:
https://www.hindujagruti.org/hinduism-for-kids-kannada/6970.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe  ಮಾಡಿ👉 : t.me/Balasanskara
🌸 ತಂದೆ ತಾಯಿಯ ಸೇವೆಯನ್ನು ಮನಃಪೂರ್ವಕವಾಗಿ ಮಾಡಿ !🌸

ತಾಯಿ ತಂದೆ ಹಾಗು ಮನೆಯಲ್ಲಿನ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡಬೇಕು. ತಾಯಿ ತಂದೆ ಹಾಗು ಮನೆಯಲ್ಲಿರುವ ಹಿರಿಯರಿಗೆ ಬಗ್ಗಿ ಅಂದರೆ ಕಾಲು ಮುಟ್ಟಿ ನಮಸ್ಕರಿಸಬೇಕು.
ಮಾತೃ ದೇವೋಭವ | ಪಿತೃ ದೇವೋಭವ | ಎಂದರೆ ತಂದೆ-ತಾಯಂದಿರು ದೇವರ ಸಮಾನ ಎಂದು ನಮ್ಮ ಮಹಾನ್ ಹಿಂದೂ ಸಂಸ್ಕೃತಿ ಕಲಿಸುತ್ತದೆ.

ತಾಯಿ - ತಂದೆಯರ ಮಹತ್ವ ತಿಳಿದುಕೊಂಡು ಅವರ ಸೇವೆ ಮಾಡಿದ ಕೆಲವು ಮಹಾಪುರುಷರು
ಶ್ರವಣ ಕುಮಾರ : ವಯೋವೃದ್ಧ ಅಂಧ ತಾಯಿ-ತಂದೆಯರ ಸೇವೆಯನ್ನು ಯಾವುದೇ ಬೇಸರವಿಲ್ಲದೆ ಶ್ರವಣನು ಮಾಡಿದನು. ವೃಧ್ದ ತಂದೆ ತಾಯಿಯರು ಕಾಶಿ ಯಾತ್ರೆಗೆ ಹೋಗುವ ಇಚ್ಚೆಯನ್ನು ವ್ಯಕ್ತ ಮಾಡಿದಾಗ ಕೂಡಲೇ ಅವರನ್ನು ಕರೆದೊಯ್ಯಲು ತಕ್ಕಡಿಯ ಸಿದ್ದತೆ ಮಾಡಿದನು.

ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/556.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ಶಿಷ್ಯನನ್ನು ಸಾಧನೆಯಲ್ಲಿ ಮುಂದೆ ಕೊಂಡೊಯ್ಯುವ ಗುರುಗಳ ತಳಮಳ !

ರಾಮನೆಂಬ ಶಿಷ್ಯನು ಗುರುಗಳು ನೀಡಿದ ಎಲ್ಲ ಸೇವೆಯನ್ನು ನಮೃತೆಯಿಂದ ಹಾಗೂ ಸೇವಾಭಾವದಿಂದ ಆಜ್ಞಾಪಾಲನೆ ಎಂದು ಮಾಡುತ್ತಿದ್ದನು. ಆದುದರಿಂದ ಗುರುಗಳು ರಾಮನನ್ನು ತನ್ನ ಉತ್ತರಾಧಿಕಾರಿ ಎಂದು ನೇಮಿಸುತ್ತಾರೆ. ಎಂದಿನಂತೆಯೇ ಅವನು ಈ ಹೊಸ ಸೇವೆಯನ್ನೂ ತಳಮಳ ಹಾಗೂ ಸೇವಾಭಾವದಿಂದ ಮಾಡುತ್ತಿದ್ದನು.

ಸ್ವಲ್ಪ ಸಮಯದ ನಂತರ ಸೋಮ ಎಂಬ ಕುಶಾಗ್ರ ಬುದ್ಧಿಯ ಯುವಕನು ಗುರುಗಳ ಶಿಷ್ಯತ್ವವನ್ನು ಸ್ವೀಕರಿಸುತ್ತಾನೆ ಹಾಗೂ ಅಲ್ಪ ಕಾಲಾವಧಿಯಲ್ಲಿಯೇ ಅವನು ಗುರುಗಳ ಮನಸ್ಸನನ್ನು ಗೆಲ್ಲುತ್ತಾನೆ. ಅವನ ಬುದ್ಧಿಗೆ ಚಾಲನೆ ಸಿಗಬೇಕೆಂದು ಗುರುಗಳು ಉತ್ತರಾಧಿಕಾರಿ ಪದವಿಯಲ್ಲಿರುವ ರಾಮನಿಗೆ ಅಡುಗೆ ಮನೆಯ ಸೇವೆಯ ಜವಾಬ್ದಾರಿಯನ್ನು ನೀಡುತ್ತಾರೆ ಹಾಗೂ ಸೋಮನನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ.

ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/780.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ಶ್ರೀವಿಷ್ಣುವಿನ ಆರನೆಯ ಅವತಾರ – ಭಗವಾನ್ ಪರಶುರಾಮ

ಪರಶುರಾಮ ಶ್ರೀವಿಷ್ಣುವಿನ ಆರನೆಯ ಅವತಾರ. ಅವರ ಕಥೆಗಳು ರಾಮಾಯಣ, ಮಹಾಭಾರತ ಹಾಗೂ ಕೆಲವು ಪುರಾಣಗಳಲ್ಲಿ ಕಂಡು ಬರುತ್ತವೆ.
ಪರಶುರಾಮರ ತಾಯಿ ರೇಣುಕಾ ಮತ್ತು ತಂದೆ ಭೃಗುಕುಲೋತ್ಪನ್ನ ಋಷಿಗಳಾದ ಜಮದಗ್ನಿ. ಹತ್ತೊಂಭತ್ತನೆಯ ತ್ರೇತಾಯುಗದಲ್ಲಿ ಪರಶುರಾಮರ ಜನನವಾಯಿತು.

ಪೂರ್ಣ ಲೇಖನ ಓದಲು👇:
https://www.hindujagruti.org/hinduism-for-kids-kannada/715.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ಸ್ವಾಮಿ ವಿವೇಕಾನಂದರ ಕ್ಷಾತ್ರಧರ್ಮ

ಕಬ್ಬಿಣದ ಬಾಹುಗಳು, ಗಟ್ಟಿಯಾದ ದೇಹ ಮತ್ತು ಅದರ ಅಂತರ್ಯದೊಳಗೆ ವಾಸಿಸುವ ವಜ್ರದಂತಹ ಮನಸ್ಸು ಇಂತಹ ಹಿಂದೂವು ಸ್ವಾಮಿ ವಿವೇಕಾನಂದರಿಗೆ ಬೇಕಾಗಿತ್ತು. ಕ್ಷಾತ್ರಧರ್ಮದ ಮಹತ್ವವನ್ನು ವಿವರಿಸುವಾಗ ಸ್ವಾಮಿ ವಿವೇಕಾನಂದರು, ‘ಬಾಹುಗಳು ಶಕ್ತಿಶಾಲಿಯಾಗುವುದರಿಂದ ಗೀತೆಯು ಇನ್ನೂ ಹೆಚ್ಚು ಉತ್ತಮವಾಗಿ ಅರ್ಥವಾಗುತ್ತದೆ. ನಮ್ಮ ಧರ್ಮೀಯರಲ್ಲಿ ರಕ್ತವು ತೇಜದಿಂದ ಕುದಿಯತೊಡಗಿತು ಎಂದರೆ ಭಗವಂತ ಶ್ರೀಕೃಷ್ಣನಂತಹ ಮಹಾಪುರುಷರ ವಿರಾಟ ಪ್ರಜ್ಞೆ ಮತ್ತು ಅಪೂರ್ವ ಸಾಮರ್ಥ್ಯಗಳು ಅರ್ಥವಾಗತೊಡಗುತ್ತವೆ’ ಎಂದಿದ್ದಾರೆ.

ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/65.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe  ಮಾಡಿ👇 : t.me/Balasanskara
🌸 ಅಕ್ಷಯ ತದಿಗೆ (ಅಕ್ಷಯತೃತಿಯಾ) 🌸

ಅಕ್ಷಯ ತದಿಗೆಯಂದು ಬ್ರಹ್ಮ ಮತ್ತು ಶ್ರೀ ವಿಷ್ಣು ಇವರ ಸಂಯುಕ್ತ ಲಹರಿಗಳು ಉಚ್ಚ ಲೋಕದಿಂದ (ಸಗುಣಲೋಕದಿಂದ) ಪೃಥ್ವಿಯ ಮೇಲೆ ಬಂದು ಪೃಥ್ವಿಯ ಸಾತ್ವಿಕತೆಯು ಶೇಕಡ ೧೦ ರಷ್ಟು ಹೆಚ್ಚಾಗುತ್ತದೆ.ಅಕ್ಷಯ ತದಿಗೆಯ ದಿನದಂದು, ನಮಗೆ ನಿರಂತರವಾಗಿ ಸುಖ ಮತ್ತು ಸಮೃದ್ಧಿಯನ್ನು ದಯಪಾಲಿಸುವ ದೇವರಿಗೆ ಕೃತಜ್ಞತೆಯ ಭಾವವಿಟ್ಟು ಮಾಡಿದ ಉಪಾಸನೆಯಿಂದ, ನಮ್ಮ ಮೇಲೆ ಇರುವ ಆ ದೇವರ ಕೃಪೆಯು ಎಂದೂ ಕ್ಷೀಣಿಸುವುದಿಲ್ಲ. ಆದುದರಿಂದ ಆ ದಿನಂದಂದು ಕೃತಜ್ಞತಾ ಭಾವವಿಟ್ಟು ಪೂಜೆಯನ್ನು ಮಾಡಬೇಕು.

ಪೂರ್ಣ ಲೇಖನ ಓದಲು👇:
https://www.hindujagruti.org/hinduism-for-kids-kannada/422.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
🌸 ಆದಿಶಂಕರಾಚಾರ್ಯರ ಜಯಂತಿ (2.05.2025) 🌸

🌼 ಚಿಕ್ಕಂದಿನಿಂದಲೇ ಅಲೌಕಿಕ ತತ್ವಹೊಂದಿದ ಆದಿ ಶಂಕರಾಚಾರ್ಯರು 🌼

ಭಗವಾನ ಶಂಕರಾಚಾರ್ಯರು ಭರತವರ್ಷ ಭೂಮಿಯ ಒಂದು ದಿವ್ಯ ವಿಭೂತಿಯಾಗಿದ್ದಾರೆ. ಅವರ ಕೌಶಲ್ಯ ಬುದ್ಧಿಯು ಈ ಘಟನೆಯಿಂದ ತಿಳಿಯುತ್ತದೆ. ಏಳನೇ ವಯಸ್ಸಿನಲ್ಲಿಯೇ ಶಂಕರರ ಪ್ರಖಂಡ ಪಾಂಡಿತ್ಯ ಮತ್ತು ಜ್ಞಾನ ಸಾಮರ್ಥ್ಯದ ಕೀರ್ತಿ ಎಲ್ಲ ಕಡೆಗಳಲ್ಲಿ ಹಬ್ಬಿತು. ಈ ಜ್ಞಾನ ಮತ್ತು ಕೀರ್ತಿ ಕೇರಳದ ರಾಜ ರಾಜಶೇಖರನ ಕಿವಿಗೆ ಬಿದ್ದಿತು. ರಾಜನು ಶಾಸ್ತ್ರಗಳಲ್ಲಿ ರುಚಿ ಇದ್ದವರಿಗೆ, ವಿದ್ವಾನರಿಗೆ, ಈಶ್ವರ ಭಕ್ತರಿಗೆ, ಶ್ರದ್ಧಾವಾನರಿಗೆ ಮತ್ತು ಪಂಡಿತರಿಗೆ ಆದರದಿಂದ ನೋಡುತ್ತಿದ್ದನು. ಅದಕ್ಕಾಗಿ ರಾಜನಿಗೆ ಈ ಬಾಲಕನನ್ನು ನೋಡುವ ತೀವ್ರ ಇಚ್ಛೆ ಇತ್ತು.

ಪೂರ್ಣ ಲೇಖನ ಓದಿ 👇: https://www.hindujagruti.org/hinduism-for-kids-kannada/84.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ಸಂತ ಭಕ್ತರಾಜ ಮಹಾರಾಜರು ಮತ್ತು ಭಗವಾನ ವಿಠ್ಠಲ !

ಪ.ಪೂ. ಭಕ್ತರಾಜ ಮಹಾರಾಜರ ಭಕ್ತಿಗೆ ಮೆಚ್ಚಿ ಪಂಢರಪುರದ ಶ್ರೀ ವಿಠ್ಠಲನು ತನ್ನ ಭಕ್ತನಿಗೋಸ್ಕರ ಬಂದು ಪೇಡಾ ತಿಂದ ಕಥೆ...


ಪ.ಪೂ. ಭಕ್ತರಾಜ ಮಹಾರಾಜರು ಇಂದೋರಿನ ಸಂತರಾಗಿದ್ದರು. ಅವರು ಭಾರತಾದ್ಯಂತ ಸಂಚಾರ ಮಾಡುತ್ತಿದ್ದರು. ಮಹಾರಾಜರಿಗೆ ಭಜನೆ ಹಾಡುವುದು ಎಂದರೆ ತುಂಬಾ ಪ್ರೀತಿಯ ವಿಷಯವಾಗಿತ್ತು.. ಅವರು ಸ್ವತಃ ಭಜನೆಗಳನ್ನು ರಚಿಸಿ ಹಾಡುತ್ತಿದ್ದರು. ಭಜನೆಗಳ ಮೂಲಕ ಅವರು ಜನರಿಗೆ ಸಾಧನೆಯನ್ನು ಕಲಿಸುತ್ತಿದ್ದರು.

ಒಮ್ಮೆ ಪ.ಪೂ. ಭಕ್ತರಾಜ ಮಹಾರಾಜರು ತಮ್ಮ ಭಕ್ತರೊಂದಿಗೆ ಪಂಢರಪುರಕ್ಕೆ ಹೋಗಿದ್ದರು. ಪಂಢರಪುರದಲ್ಲಿ ಶ್ರೀವಿಠ್ಠಲನ ದೇವಸ್ಥಾನವಿದೆ. ಪ.ಪೂ. ಭಕ್ತರಾಜ ಮಹಾರಾಜರು ತಮ್ಮ ಭಕ್ತರೊಂದಿಗೆ ಪಂಢರಪುರದಲ್ಲಿ ಹೋಳ್ಕರ ನಿವಾಸದಲ್ಲಿ ಕುಳಿತಿದ್ದರು. ಆ ಸಮಯದಲ್ಲಿ ಶ್ರೀವಿಠ್ಠಲನ ದೇವಸ್ಥಾನದ ಅರ್ಚಕರು ಅಲ್ಲಿಗೆ ಬಂದರು.

ಪೂರ್ಣ ಕಥೆ  ಓದಿ👇 : https://www.hindujagruti.org/hinduism-for-kids-kannada/7048.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ subscribe ಮಾಡಿ 👇: t.me/Balasanskara
🌸 ವಲ್ಲಭಾಚಾರ್ಯ 🌸

ವೈಶ್ವನಾವತಾರ (ಅಗ್ನಿಯ ಅವತಾರ) ಎಂದು ಪರಿಗಣಿಸಲ್ಪಡುವ ಶ್ರೀ ವಲ್ಲಭಾಚಾರ್ಯ ಪುಷ್ಟಿಮಾರ್ಗದ ಸ್ಥಾಪಕರು, ಶ್ರೇಷ್ಠ ಕೃಷ್ಣ ಭಕ್ತರು ಮತ್ತು ‘ಮಧುರಾಷ್ಟಕಂ’ ರಚನಾಕಾರರು.

ಭಕ್ತಿಕಾಲದ ಸಗುಣಧಾರೆಯ ಕೃಷ್ಣಭಕ್ತಿ ಶಾಖೆಯ ಆಧಾರಸ್ತಂಭ ಹಾಗೂ ಪುಷ್ಟಿಮಾರ್ಗದ ರಚನಕಾರರಾದ ಶ್ರೀವಲ್ಲಭಾಚಾರ್ಯ ಪ್ರಾದುರ್ಭಾವ ಸಂವತ್ಸರ 1535, ಚೈತ್ರ ಕೃಷ್ಣ ಏಕಾದಶಿಯಂದು ದಕ್ಷಿಣ ಭಾರತದ ಕಾಂಕರವಾಡ ಗ್ರಾಮದ ತೈಲಂಗ ಬ್ರಾಹ್ಮಣರ ಪತ್ನಿಯಾದ ಇಲಮ್ಮಾಗಾರು ಇವರಿಗೆ ಜನಿಸಿದರು. ಇವರನ್ನು ವೈಶ್ವನಾವತಾರ (ಅಗ್ನಿಯ ಅವತಾರ) ಎಂದು ಕರೆಯಲಾಗುತ್ತದೆ. ಇವರು ವೇದಶಾಸ್ತ್ರಗಳಲ್ಲಿ ಪಾರಂಗತರಿದ್ದರು.

ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/713.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ಬಾಲ ಮಿತ್ರರೇ, ನೀವು ನಿಮ್ಮ ದೈನಂದಿನ ಆಚರಣೆಯನ್ನು ಸುಸಂಸ್ಕಾರವಾಗಿ ಮಾಡಿರಿ

ಚಿಕ್ಕ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವಾಗಲು ಪ್ರತಿದಿನ ನಿಯಮಾನುಸಾರವಾಗಿ ಕೆಲವು ಪ್ರಾಥಮಿಕ ವಿಚಾರಗಳನ್ನು ಆಚರಣೆಗೆ ತರುವ ಅವಶ್ಯಕತೆಯಿದೆ. ಎದ್ದ ನಂತರ ಪ್ರಾತಃ ವಿಧಿ, ಸ್ನಾನ ಮಾಡಿಕೊಂಡು ದೇವರಿಗೆ, ತಂದೆ ತಾಯಿಗೆ ಹಾಗು ದೊಡ್ಡವರಿಗೆ ನಮಸ್ಕಾರ ಮಾಡಬೇಕು. ಪ್ರತಿದಿನ ಸೂರ್ಯನಮಸ್ಕಾರ ಮಾಡಬೇಕು ಅಥವಾ ವ್ಯಾಯಾಮ ಮಾಡಬೇಕು.

ದೇವರ ಚಿತ್ರವನ್ನು ಒರೆಸಿಟ್ಟು, ಊದುಬತ್ತಿಯನ್ನು ಹಚ್ಚುವುದು, ಇಲ್ಲವಾದರೆ ಪೂಜೆ ಮಾಡುವುದು, ಸ್ತೋತ್ರ ಪಠಣ, ಶ್ಲೋಕ, ಆರತಿ, ನಾಮಸ್ಮರಣೆ, ಧ್ಯಾನ, ಸಂಧ್ಯಾ ಪೂಜೆ ಇತ್ಯಾದಿಗಳಲ್ಲಿ ಯಾವುದನ್ನಾದರೂ ವಯಸ್ಸಿಗನುಸಾರ ನಿಯಮಿತವಾಗಿ ಮಾಡಬೇಕು. ಹಾಲು, ನೀರು ಕುಡಿದ ನಂತರ ತಮ್ಮ ಲೋಟವನ್ನು ತಾವೇ ಸ್ವಚ್ಛಗೊಳಿಸುವುದು.

ಪೂರ್ಣ ಲೇಖನ ಓದಿ 👇: https://www.hindujagruti.org/hinduism-for-kids-kannada/127.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👇: t.me/Balasanskara
ಸಮಯದ ನಿಯೋಜನೆ

ಸಮಯದ ನಿಯೋಜನೆ ಸಂದರ್ಭದಲ್ಲಿ ಹೀಗೆ ಹೇಳಬಹುದು, ಏನೆಂದರೆ ಕಡಿಮೆ ಮಹತ್ವವುಳ್ಳ ವಿಷಯಕ್ಕೆ ನಾವು ೮೦ ಪ್ರತಿಶತ ಸಮಯವನ್ನು ಉಪಯೋಗಿಸಿ ೨೦ ಪ್ರತಿಶತ ಪರಿಣಾಮವನ್ನು ಪಡೆಯುತ್ತೇವೆ. ಆದರೆ ಮಹತ್ವವುಳ್ಳ ವಿಷಯಕ್ಕೆ ಮಾತ್ರ ನಾವು ಕೇವಲ ೨೦ ಪ್ರತಿಶತ ಸಮಯ ನೀಡುತ್ತೇವೆ. ಆದಕಾರಣ ನಮಗೆ ಸಮಯವೇ ಸಾಕಾಗುವುದಿಲ್ಲ. ಮುಂದಿನ ಅಂಶಗಳನ್ನು ಗಮನದಲ್ಲಿಟ್ಟರೆ ಸಮಯದ ನಿಯೋಜನೆ ಮಾಡಲಿಕ್ಕೆ ಸುಲಭವಾಗುವುದು.
ಧ್ಯೇಯವನ್ನುಇಟ್ಟುಕೊಳ್ಳುವುದು.
ಅದರಲ್ಲಿ ದೀರ್ಘಕಾಲದ ಮತ್ತು ತಕ್ಷಣ ಸಾಧ್ಯಗೊಳ್ಳುವ
ಧ್ಯೇಯಗಳನ್ನು ಬೇರೆ ಮಾಡಿರಿ.

ಪೂರ್ಣ ಲೇಖನ ಓದಿ 👇: https://www.hindujagruti.org/hinduism-for-kids-kannada/626.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 :
t.me/Balasanskara
ಶ್ರೀವಿಷ್ಣುವಿನ ಆರನೆಯ ಅವತಾರ – ಪರಶುರಾಮ

ಪರಶುರಾಮರು ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿದ್ದಾರೆ.

ಪರಶುರಾಮರ ತಾಯಿ ರೇಣುಕಾ ಮತ್ತು ತಂದೆ ಭೃಗುಕುಲೋತ್ಪನ್ನ ಋಷಿಗಳಾದ ಜಮದಗ್ನಿ. ಹತ್ತೊಂಭತ್ತನೆಯ ತ್ರೇತಾಯುಗದಲ್ಲಿ (ಮಹಾಭಾರತಕ್ಕನುಸಾರ ತ್ರೇತಾ ಹಾಗೂ ದ್ವಾಪರಯುಗಗಳ ಸಂಧಿಕಾಲದಲ್ಲಿ) ಪರಶುರಾಮರ ಜನನವಾಯಿತು.
ಪರಶುರಾಮರು ಶ್ರೀವಿಷ್ಣುವಿನ ಅವತಾರವಾಗಿರುವುದರಿಂದ ಅವರು ಉಪಾಸ್ಯದೇವತೆಯಂದು ಪೂಜಿಸಲಾಗುತ್ತದೆ.

ಪೂರ್ಣ ಲೇಖನ ಓದಲು👇:
https://www.hindujagruti.org/hinduism-for-kids-kannada/715.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 :
t.me/Balasanskara
🚩 ಮಹಾರಾಣಾ ಪ್ರತಾಪ ಜಯಂತಿ

ಶೂರ ಮತ್ತು ಸ್ವಾಭಿಮಾನಿ ರಾಜಾ ಮಹಾರಾಣಾ ಪ್ರತಾಪ ಹೆಸರು ಹಿಂದೂಸ್ಥಾನದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ

ಹಿಂದೂಸ್ಥಾನದ ಇತಿಹಾಸದಲ್ಲಿ ಪ್ರೇರಣಾದಾಯಕವಾದ ಮಹಾರಾಣಾ ಪ್ರತಾಪ ಹೆಸರು ಸಾಹಸ, ಶೌರ್ಯ, ತ್ಯಾಗಗಳ ಪ್ರತೀಕವಾಗಿದೆ. ಮೇವಾಡದ ಸಿಸೋದಿಯಾ ಮನೆತನದಲ್ಲಿ ಬಾಪ್ಪಾ ರಾವಳ, ರಾಣಾ ಹಮೀರ, ರಾಣಾ ಸಾಂಗ ಇತ್ಯಾದಿ ಅನೇಕ ಶೂರವೀರರು ಜನ್ಮತಾಳಿದರು. ಈ ಮಹಾನ್ ಮನೆತನದಲ್ಲಿಯೇ ೧೫೪೦ರಲ್ಲಿ ಮಹಾರಾಣಾ ಪ್ರತಾಪ ಜನ್ಮ ತಾಳಿದ್ದು. ಇವರು ಮೇವಾಡದ ರಾಣಾ ಉದಯ ಸಿಂಹ (ದ್ವಿತೀಯ) ಇವರ ಜ್ಯೇಷ್ಠ ಪುತ್ರರಾಗಿದ್ದಾರೆ. ಸ್ವಾಭಿಮಾನ ಹಾಗೂ ಸದಾಚಾರ ಪ್ರತಾಪಸಿಂಹರ ಮುಖ್ಯ ಗುಣಗಳಾಗಿದ್ದವು. ಅವರಿಗೆ ಚಿಕ್ಕಂದಿನಿಂದಲೇ ಮೈದಾನದಲ್ಲಿನ ಆಟ ಹಾಗೂ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವುದರಲ್ಲಿ ಆಸಕ್ತಿಯಿತ್ತು.

ಪೂರ್ಣ ಲೇಖನ ಓದಿ 👇: https://www.hindujagruti.org/hinduism-for-kids-kannada/433.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ ಸಬ್ಸ್ಕ್ರೈಬ್ ಮಾಡಿ👇 : t.me/Balasanskara
ಸಮುದ್ರ ಮಂಥನ ಮತ್ತು ರಾಹು !

ಬಾಲ ಮಿತ್ರರೇ, ನಿಮಗೆ ಅಭಿಮನ್ಯು ಯಾರೆಂದು ಗೊತ್ತೇ ಇದೆ. ಅಭಿಮನ್ಯು ಮಹಾಭಾರತದ ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡಿ ಕೌರವರ ಸೇನೆಯ ಮಹಾರಥಿಗಳನ್ನು ತನ್ನ ಪರಾಕ್ರಮದಿಂದ ಬೆರಗುಗೊಳಿಸಿದ ವೀರ. ರಾಜಾ ಪರೀಕ್ಷಿತನು ಅಭಿಮನ್ಯುವಿನ ಪುತ್ರನಾಗಿದ್ದನು ಮತ್ತು ರಾಜಾ ಪರೀಕ್ಷಿತನ ಪುತ್ರನ ಹೆಸರು ಜನಮೇಜಯ ಎಂದಿತ್ತು.

ಪೂರ್ಣ ಲೇಖನ ಓದಿ👇 :
https://www.hindujagruti.org/hinduism-for-kids-kannada/7078.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
🚩 ರಾಜಮಾತೆ ಜಿಜಾಬಾಯಿ ಆದರ್ಶವನ್ನು ಪಾಲಿಸುವುದು ಅತ್ಯಾವಶ್ಯಕ!

‘ಛತ್ರಪತಿ ಶಿವಾಜಿಯವರು ಹಿಂದವೀ ಸ್ವರಾಜ್ಯ ಅಂದರೆ ‘ಆದರ್ಶ ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿದರು. ಈ ರಾಷ್ಟ್ರವು ನಿರ್ಮಾಣವಾಗಲೆಂದು ರಾಜಮಾತೆ ಜಿಜಾಬಾಯಿ ಶಿವಾಜಿಯ ಬಾಲ್ಯದಲ್ಲಿಯೆ ಇದರ ಬೀಜವನ್ನು ಬಿತ್ತಿದರು. ಅವರಲ್ಲಿ ಜಾಜ್ಜ್ವಲ್ಯಮಾನ ಧರ್ಮಾಭಿಮಾನ ಹಾಗೂ ರಾಷ್ಟ್ರಾಭಿಮಾನವನ್ನು ನಿರ್ಮಿಸಿದರು. ಜಿಜಾಬಾಯಿ ಶಿವಾಜಿಗೆ ಶಸ್ತ್ರಾಸ್ತ್ರಗಳ ಪ್ರಶಿಕ್ಷಣ ನೀಡಿ ಅವರಲ್ಲಿ ಕ್ಷಾತ್ರವೃತ್ತಿಯನ್ನು ಜಾಗೃತಗೊಳಿಸಿದರು.

ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/710.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ subscribe ಮಾಡಿ👇 : t.me/Balasanskara
ನಾರದರ ನಾರಾಯಣ ಭಕ್ತಿ !
(ದೇವರ್ಶಿ ನಾರದ ಜಯಂತಿ 13-05-2025 )


ತಮಗೆ ದೇವರ್ಷಿ ನಾರದರ ಬಗ್ಗೆ ತಿಳಿದಿದೆಯಲ್ಲವೇ ? ನಾರದಮುನಿಗಳು ಬ್ರಹ್ಮದೇವರ ಮಾನಸಪುತ್ರರಾಗಿದ್ದರು ಹಾಗೂ ಭಗವಾನ ವಿಷ್ಣುವಿನ ಶ್ರೇಷ್ಠ ಭಕ್ತರಾಗಿದ್ದರು. ಅವರು ಸದಾ ‘ನಾರಾಯಣ ನಾರಾಯಣ’ ಈ ನಾಮಜಪವನ್ನು ಮಾಡುತ್ತಿದ್ದರು. ಒಮ್ಮೆ ದೇವರ್ಷಿ ನಾರದರಿಗೆ ತಮ್ಮ ಭಕ್ತಿಯ ಮೇಲೆ ಬಹಳ ಗರ್ವ ಉಂಟಾಯಿತು. ಅವರು ತಮ್ಮ ಮನಸ್ಸಿನಲ್ಲಿ ಹರಿ ನಾಮವನ್ನು ಜಪಿಸುವುದರಿಂದ ನಾನು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಂತಹ ಷಡ್ರಿಪುಗಳ ಮೇಲೆ ವಿಜಯ ಸಾಧಿಸಿದ್ದೇನೆ.

ನಾರದರ ನಾರಾಯಣ ಭಕ್ತಿಯ ಬಗ್ಗೆ ತಿಳಿಯಿರಿ 👇: https://www.hindujagruti.org/hinduism-for-kids-kannada/6950.html

ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 :
t.me/Balasanskara